Advertisement

Adipurush ಸಿನಿಮಾ: 5 ಸಂಭಾಷಣೆ ಬದಲು

10:09 AM Jun 19, 2023 | Team Udayavani |

ಮುಂಬೈ: “ಆದಿಪುರುಷ್‌’ ಸಿನಿಮಾದಲ್ಲಿ ಹನುಮಂತ ಪಾತ್ರಧಾರಿಯ ಸಂಭಾಷಣೆಗೆ ಸಂಬಂಧಿಸಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಸಂಭಾಷಣೆಗಳನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ.

Advertisement

ಇದು ಮೂಲ ರಾಮಾಯಣ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರಲಿದೆ ಎಂಬುದನ್ನು ಅರಿತ ಚಿತ್ರತಂಡ, ಸಿನಿಮಾದಲ್ಲಿ ಹನುಮಾನ್‌ ಪಾತ್ರಧಾರಿಯ ಐದು ಸಂಭಾಷಣೆಗಳನ್ನು ಬದಲಿಸಲಿದೆ.

“ನಮ್ಮ ಗುರಿಯು ಸನಾತನ ಪರಂಪರೆಯ ನಿಜವಾದ ಹೀರೋಗಳನ್ನು ಯುವಜನರಿಗೆ ಪರಿಚಯಿಸುವುದಾಗಿದೆ. ಕೆಲ ಸಂಭಾಷಣೆಗಳು ಜನರಿಗೆ ಇಷ್ಟವಾಗದಿದ್ದರೆ, ಅದನ್ನು ಬದಲಿಸುವುದು ನಮ್ಮ ಕರ್ತವ್ಯ,’ ಎಂದು ಚಿತ್ರದ ಸಂಭಾಷಣೆಕಾರ ಮನೋಜ್‌ ಮುನ್ತಾಶಿರ್‌ ಹೇಳಿದ್ದಾರೆ.

ಚಿತ್ರದಲ್ಲಿ ಲಂಕಾ ದಹನದ ವೇಳೆ ಹನುಮಂತನಾಡುವ, “ಎಣ್ಣೆ ನಿಮ್ಮ ಅಪ್ಪನದು. ಅಗ್ನಿ ನಿಮ್ಮ ಅಪ್ಪನದು. ಹೀಗಾಗಿ ಸುಡುವುದು ಕೂಡ ನಿಮ್ಮ ಅಪ್ಪನದ್ದೇ’ ಎಂಬ ಮಾತಿಗೂ ಕತ್ತರಿ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next