Advertisement

“ಅಡಿಗರು ನವ್ಯ ಸಾಹಿತ್ಯದ ಅಮೂಲ್ಯ ರತ್ನ’

08:35 AM Mar 22, 2018 | |

ಹೆಬ್ರಿ: ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡ ನವ್ಯ ಸಾಹಿತ್ಯದ ಅಮೂಲ್ಯ ರತ್ನ. ಅಡಿಗರ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಡಾ|ಟಿ.ಎಂ.ಎ ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ  ಡಾ| ಮಹಾಬಲೇಶ್ವರ ರಾವ್‌ ಹೇಳಿದರು.

Advertisement

ಅವರು ಉಡುಪಿ ಜಿಲ್ಲಾ ಕ.ಸಾ.ಪ. ಮತ್ತು ಸ.ಪ್ರ.ದ.ಕಾಲೇಜು ಹಿರಿಯಡಕ ಇವರ ಸಹಯೋಗದೊಂದಿಗೆ ಹಿರಿಯಡಕ ಸ.ಪ್ರ.ದ.ಕಾಲೇಜಿನಲ್ಲಿ  ನಡೆದ ಕುರಾಡಿ ಸೀತಾರಾಮ ಅಡಿಗ , ಟಿ. ಕಮಲಾಕ್ಷಿ ಎಸ್‌.ಅಡಿಗ ದತ್ತಿನಿಧಿ ಕಾರ್ಯಕ್ರಮ, ಮೊಗೇರಿ ಗೋಪಾಲಕೃಷ್ಣ ಅಡಿಗ ನೂರೊಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯಡಕ ಸ. ಪ್ರ. ದ.  ಕಾಲೇಜಿನ ಪ್ರಾಂಶುಪಾಲ ಜಿ.ಆರ್‌.ರಾಯ್ಕರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಗೋಪಾಲಕೃಷ್ಣ ಅಡಿಗರ ಕೊಡುಗೆಯನ್ನು ಕುರಿತು ಪ್ರತಾಪ್‌ ಚಂದ್ರ  ಶೆಟ್ಟಿ ಹಳ್ನಾಡು   ಉಪನ್ಯಾಸ ನೀಡಿದರು. ಎಚ್‌. ಚಂದ್ರಶೇಖರ ಕೆದ್ಲಾಯ ಅವರಿಂದ ಅಡಿಗರ ಗೀತಗಾಯನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಡಾ| ಪಾದೇಕಲ್ಲು ವಿಷ್ಣು ಭಟ್‌, ಡಾ| ನಿಕೇತನ, ಸುಜಯ ಕೆ.ಎಸ್‌. ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ಜಿ.ಕ.ಸಾ.ಪ. ಗೌರವಾಧ್ಯಕ್ಷ ನಾರಾಯಣ ಮಡಿ ಸ್ವಾಗತಿಸಿ, ಉಪನ್ಯಾಸಕ ಸುಭಾಷ್‌ ಹೆಚ್‌.ಕೆ ನಿರೂಪಿಸಿ, ರಾಘವೇಂದ್ರ ಪಿ.ಕೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next