Advertisement

ಅದಾನಿ ಯುಪಿಸಿಎಲ್‌: 1.50 ಕೋಟಿ ರೂ. ವೆಚ್ಚದಲ್ಲಿ ಕೆರೆ ಪುನಃಶ್ಚೇತನ

01:27 PM Mar 26, 2017 | Harsha Rao |

ಪಡುಬಿದ್ರಿ: ಅದಾನಿ ಒಡೆತನದ ಯುಪಿಸಿಎಲ್‌ ಕಂಪೆನಿಯ ಸಿಎಸ್‌ಆರ್‌ ಯೋಜನೆ ಯಡಿ ಸುಮಾರು 1.5 ಕೋ. ರೂ. ವೆಚ್ಚದಲ್ಲಿ ಮುದರಂಗಡಿ ಗ್ರಾ. ಪಂ. ವ್ಯಾಪ್ತಿಯ ಸಾಂತೂರು ಗ್ರಾಮದಲ್ಲಿ ಸುಮಾರು 6 ಎಕ್ರೆ ಪ್ರದೇಶದಲ್ಲಿರುವ ಅವಳಿ ಮೈಂದಕೆರೆಯ ಪುನಃಶ್ಚೇತನ ಕಾಮಗಾರಿಗೆ ಕಂಪೆನಿ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಮಾ. 25ರಂದು ಚಾಲನೆ ನೀಡಿದರು.

Advertisement

ಈ ಸಂದರ್ಭ ಮಾತನಾಡಿದ ಕಿಶೋರ್‌ ಆಳ್ವ, ಸಾಂತೂರು ಗ್ರಾಮಸ್ಥರು ಹಾಗೂ ಮುದರಂಗಡಿ ಗ್ರಾ. ಪಂ. ಸರ್ವ ಸದಸ್ಯರು ಮೈಂದಕೆರೆ ಅಭಿವೃದ್ಧಿ ಪಡಿಸಬೇಕೆಂದು ಬೇಡಿಕೆಯಿಟ್ಟಿದ್ದರು. ಇಂದು ಅದಾನಿ ಯುಪಿಸಿಎಲ್‌ ತನ್ನ ಸಿಎಸ್‌ಆರ್‌ ಯೋಜನೆಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಈ ಕಾಮಗಾರಿಗೆ ಮುಂದಾಗಿದ್ದು, ಕೆರೆ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಪರಿವರ್ತಿಸಲಾಗುವುದು ಎಂದರು. 

2017-18ನೇ ವಾರ್ಷಿಕ ಸಾಲಿನಲ್ಲಿ ಒಟ್ಟು 3.00 ಕೋ. ರೂ. ಅನುದಾನವನ್ನು ಸಿ.ಎಸ್‌.ಆರ್‌. ಯೋಜನೆಯಡಿ ಸ್ಥಾವರದ ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿಗೆ ಮೀಸಲಿಟ್ಟಿದೆ. ಕೆರೆಗಳ ಜೀರ್ಣೋದ್ಧಾರವಾದರೆ ಸುತ್ತಮುತ್ತ ಲಿನ ಬಾವಿಗಳಲ್ಲಿರುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಆಳ್ವ ಅವರು ಹೇಳಿದರು.

ಮುದರಂಗಡಿ ಗ್ರಾಮಪಂಚಾಯತ್‌ ಅಧ್ಯಕ್ಷ ಡೇವಿಡ್‌ ಡಿ”ಸೋಜಾ, ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಯುಪಿಸಿಎಲ್‌ ಕಂಪೆನಿಯ ಸಿವಿಲ್‌ ಮುಖ್ಯಸ್ಥ ಕೆ. ಲಕ್ಷ್ಮಣ್‌, ಎಜಿಎಂ ಗಿರೀಶ್‌ ನಾವಡ, ಪ್ರಬಂಧಕ ರವಿ ಜೇರೆ, ಗೋಕುಲ್‌ದಾಸ್‌ ನಾಯ್ಕ, ದಯಾನಂದ ಆಳ್ವ, ವಸಂತಕುಮಾರ್‌, ಅದಾನಿ ಫೌಂಡೇಶನ್‌ನ ವಿನೀತ್‌ಅಂಚನ್‌, ಸುಕೇಶ್‌ ಸುವರ್ಣ, ಅನುದೀಪ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next