Advertisement

ಅದಾನಿ ಪ್ರಕರಣ: ಮಾಧ್ಯಮಗಳಿಗೆ ನಿರ್ಬಂಧ ಹೇರಲು ಸುಪ್ರೀಂ ನಕಾರ

11:21 PM Feb 24, 2023 | Team Udayavani |

ನವದೆಹಲಿ: ಅದಾನಿ-ಹಿಂಡನ್‌ಬರ್ಗ್‌ ಪ್ರಕರಣದ ಕುರಿತು ವರದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಪ್ರತಿಬಂಧಕಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

Advertisement

ಮಾಧ್ಯಮಗಳಿಗೆ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಕೋರಿ ವಕೀಲ ಎಂ.ಎಲ್‌.ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾ ರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, “ಪ್ರಕರಣದ ಪರಿಶೀಲ ನೆಗೆ ಸಮಿತಿ ರಚಿಸುವ ಕುರಿತು ಆದೇಶ ಹೊರ ಬೀಳು ವವರೆಗೂ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ’ ಎಂದು ಹೇಳಿದೆ.

12 ಲಕ್ಷ ಕೋಟಿ ನಷ್ಟ: ಈ ನಡುವೆ, ಹಿಂಡನ್‌ಬರ್ಗ್‌ ವರದಿ ಪರಿಣಾಮವೆಂಬಂತೆ, ಕೇವಲ ಒಂದು ತಿಂಗಳಲ್ಲಿ ಅದಾನಿ ಗ್ರೂಪ್‌ನ 10 ಕಂಪನಿಗಳ ಮಾರುಕಟ್ಟೆ ಮೌಲ್ಯ 12 ಲಕ್ಷ ಕೋಟಿ ರೂ.ಗಳಷ್ಟು ಕುಸಿತ ಕಂಡಿದೆ. ಜನವರಿ 24ಕ್ಕೂ ಮುಂಚೆ ಅದಾನಿ ಗ್ರೂಪ್‌ ಮೌಲ್ಯ 19 ಲಕ್ಷ ಕೋಟಿ ರೂ.ಗಳಾಗಿದ್ದವು. ಈಗ ಅದು 7.2 ಲಕ್ಷ ಕೋಟಿ ರೂ.ಗೆ ಇಳಿದಿದೆ.

ಖರೀದಿ ಮೊತ್ತಕ್ಕಿಂತಲೂ ಕೆಳಗಿಳಿದ ಮೌಲ್ಯ: ಇದೇ ವೇಳೆ, ಎಲ್‌ಐಸಿ ಬಳಿಯಿದ್ದ ಅದಾನಿ ಗ್ರೂಪ್‌ನ 7 ಕಂಪನಿಗಳ ಷೇರುಗಳ ಮೌಲ್ಯವು ಖರೀದಿ ಮೊತ್ತಕ್ಕಿಂತಲೂ ಕೆಳಗಿಳಿದಿದ್ದು, ಶೇ.11 ರಷ್ಟು ಕುಸಿತ ಕಂಡಿದೆ. ಕಂಪನಿಗಳ ಷೇರುಗಳನ್ನು ಎಲ್‌ಐಸಿ 30,127 ಕೋಟಿ ರೂ.ಗಳಿಗೆ ಖರೀದಿಸಿತ್ತು. ಶುಕ್ರವಾರ ಇವುಗಳ ಮೌಲ್ಯ 26,862 ಕೋಟಿ ರೂ.ಗಳಿಗೆ ತಲುಪಿದೆ .

Advertisement

Udayavani is now on Telegram. Click here to join our channel and stay updated with the latest news.

Next