Advertisement
ಇದುವರೆಗೆ ಅಲಂಕೃತ ವಾಹನದಲ್ಲಿ ಬರುತ್ತಿದ್ದ ಭಾವೀ ಪರ್ಯಾಯ ಮಠಾಧೀಶರು ಈ ಬಾರಿ ಜೋಡುಕಟ್ಟೆಯಿಂದ ರಥಬೀದಿಯ ವರೆಗೆ ಕಾಲ್ನಡಿಗೆಯಲ್ಲೇ ಆಗಮಿಸುವರು. ಅಪರಾಹ್ನ 2.30ಕ್ಕೆ ಪುರಪ್ರವೇಶ ಮಾಡಲಿರುವ ಶ್ರೀಪಾದರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ಉಡುಗೆಯಲ್ಲಿ ಮತ್ತು ವಿವಿಧ ಜಾನಪದೀಯ ತಂಡಗಳಾಗಿ ಆಗಮಿಸಲಿದ್ದಾರೆ. ವಿದ್ವಾಂಸರು ಶ್ವೇತವಸ್ತ್ರಧಾರಿಗಳಾಗಿ ಆಗಮಿಸುವರು. ಒಂಟೆ, ಕುದುರೆಗಳು ಮೆರವಣಿಗೆಯಲ್ಲಿರುತ್ತವೆ. ಭಜನ ತಂಡದವರು ಭಜನೆಗಳನ್ನು ಹಾಡುತ್ತ ಮೆರವಣಿಗೆಯಲ್ಲಿ ಸಾಗುವರು.
Related Articles
ಜ. 18ರ ಪ್ರಾತಃಕಾಲ ಮೇನೆಯಲ್ಲಿ ಆಗಮಿಸುವ ಸ್ವಾಮೀಜಿಯವರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಈ ಬಾರಿ ಜ. 17ರ ರಾತ್ರಿ ಭಕ್ತರಿಗೆ ಭೋಜನ ಪ್ರಸಾದದ ವ್ಯವಸ್ಥೆಯನ್ನು ಪಾರ್ಕಿಂಗ್ ಪ್ರದೇಶದಲ್ಲಿ ಮಾಡಲಾಗುತ್ತಿದೆ. ಜ. 18ರಂದು ಪರ್ಯಾಯೋತ್ಸವದ ಭೋಜನದಲ್ಲಿ ಸಾವಿರಾರು ಭಕ್ತರು ಭಾಗವಹಿಸುವರು. ಜ. 17ರ ಮಧ್ಯಾಹ್ನ ಪ್ರಸಕ್ತ ಪರ್ಯಾಯ ಪಲಿಮಾರು ಮಠದಿಂದ ವಿಶೇಷ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಜ. 17ರ ರಾತ್ರಿ ಭೋಜನದ ವ್ಯವಸ್ಥೆ ಇದ್ದಿರಲಿಲ್ಲ. 2016ರಲ್ಲಿ ಪೇಜಾವರ ಶ್ರೀಗಳು ಜ. 17ರ ರಾತ್ರಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
Advertisement