Advertisement

ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು

12:47 AM Feb 23, 2019 | |

ಬೆಂಗಳೂರು: “ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮೀ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ತೀವ್ರವಾದ ಆಯಾಸ, ರಕ್ತದೊತ್ತಡ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ
ಗುರುವಾರ ಸಂಜೆ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಈ ಬಗ್ಗೆ ವಿಜಯಲಕ್ಷ್ಮೀ ಸೋದರಿ ಉಷಾದೇವಿ ಮಾತನಾಡಿ, “ಕಳೆದ ವಾರ ನಮ್ಮ ತಾಯಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು, ಅದೇ ಒತ್ತಡದಿಂದ ವಿಜಯಲಕ್ಷ್ಮೀ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇನ್ನೂ ಮೂರು ದಿನ ಆಸ್ಪತ್ರೆಯಲ್ಲೇ  ಇರಬೇಕೆಂದು ವೈದ್ಯರು ಸೂಚಿಸಿದ್ದಾರೆ, ಆತಂಕಪಡುವಂತದ್ದೇನಿಲ್ಲ ಎಂದು ತಿಳಿಸಿದ್ದಾರೆ’ ಎಂದಿದ್ದಾರೆ.

ಚಿಕಿತ್ಸೆಗೆ ಹಣದ ಸಮಸ್ಯೆಯಿದೆ ಎಂದಿರುವ ಉಷಾದೇವಿ, “ನಮ್ಮ ಬಳಿ ಇದ್ದ ಹಣವನ್ನೆಲ್ಲ ನಮ್ಮ ತಾಯಿಯ ಚಿಕಿತ್ಸೆಗೆ ಖರ್ಚು ಮಾಡಿದ್ದೇವೆ. ಹಾಗಾಗಿ ಹಣದ ಸಮಸ್ಯೆಯಾಗಿದೆ. ಕನ್ನಡ ಚಿತ್ರರಂಗದಿಂದ ಏನಾದರೂ ಸಹಾಯ ದೊರೆಯಬಹುದೆಂದು ನಿರೀಕ್ಷೆಯಲ್ಲಿದ್ದೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next