Advertisement

ಜಲ್ಲಿಕಟ್ಟು ವಿರುದ್ಧ ಮಾತೇ ಆಡಿಲ್ಲ: ನಟಿ ತೃಷಾ, ಕೀಟಲೆಗೆ ಖೇದ

03:42 PM Jan 14, 2017 | udayavani editorial |

ಚೆನ್ನೈ : ದಕ್ಷಿಣ ಭಾರತದ ಚಿತ್ರ ನಟಿ ತೃಷಾ ಇದೀಗ ಜಲ್ಲಿಕಟ್ಟು ಬೆಂಬಲಿಗರ ಕೋಪಕ್ಕೆ ಗುರಿಯಾಗಿದ್ದಾರೆ. ಜಲ್ಲಿಕಟ್ಟು ವಿರುದ್ಧ ಕಠಿನ ನಿಲುವು ತಳೆದಿರುವ ಪ್ರಾಣಿ ದಯಾ ಸಂಘಟನೆ ಪೇಟಾ ಪರ ಪ್ರಚಾರ ನಿರತೆಯಾಗಿರುವ ತೃಶಾ ಳ ಸಿನೇಮಾ ಚಿತ್ರೀಕರಣಕ್ಕೆ ಜಲ್ಲಿಕಟ್ಟು ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಆದರೆ ತೃಷಾ ತಾನೆಂದೂ ಜಲ್ಲಿಕಟ್ಟು ವಿರುದ್ಧ ಮಾತೇ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲದೆ ತನಗೆ ಅನಗತ್ಯವಾಗಿರುವ ನೀಡಲಾಗುತ್ತಿರುವ ಕೀಟಲೆಗೆ ಆಕೆ ಖೇದ ವ್ಯಕ್ತಪಡಿಸಿದ್ದಾರೆ.

Advertisement

ತೃಷಾ ನಟಿಸುತ್ತಿರುವ “ಘರ್ಜನೈ’ ತಮಿಳು ಚಿತ್ರದ ಚಿತ್ರೀಕರಣ ನಿನ್ನೆ ಶುಕ್ರವಾರ ಶಿವಗಂಗಾ ಜಿಲ್ಲೆಯಲ್ಲಿ ನಡೆಯುತ್ತಿದ್ದಾಗ ಜಲ್ಲಿಕಟ್ಟು ಬೆಂಬಲಿಗರು ಅಲ್ಲಿಗೆ ದಾಂಗುಡಿ ಇಟ್ಟು  ಪಿಕೆಟಿಂಗ್‌ ನಡೆಸಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದರು.

ಪೇಟಾ ಟಿ ಶರ್ಟ್‌ ತೊಟ್ಟುಕೊಂಡಿರುವ ತೃಷಾಳ ಫೋಟೋಗೆ ಕೆಟ್ಟ ಕೆಟ್ಟ ಸಂದೇಶಗಳನ್ನು ಜೋಡಿಸಲಾದ ಸಂದೇಶಗಳು ನಿನ್ನೆಯಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ತನ್ನ ವಿರುದ್ಧ ವಿನಾಕಾರಣವಾಗಿ ಈ ರೀತಿಯ ಅಪಪ್ರಚಾರ ಮಾಡುವು ತಮಿಳರ ಸಂಸ್ಕೃತಿಯಲ್ಲ ಎಂದು ತೃಷಾ ಹೇಳಿದ್ದಾಳೆ. 

Advertisement

Udayavani is now on Telegram. Click here to join our channel and stay updated with the latest news.

Next