Advertisement

ಡಿವೋರ್ಸ್ ಬಗ್ಗೆ ಸಮಂತಾ ತಂದೆ ಹೇಳಿದ್ದೇನು ?

03:15 PM Oct 06, 2021 | Team Udayavani |

ಹೈದರಾಬಾದ್ : ತಮ್ಮ ಮಗಳ ವಿಚ್ಛೇದನದ ಬಗ್ಗೆ ನಟಿ ಸಮಂತಾ ಅವರ ತಂದೆ ಮೌನ ಮುರಿದಿದ್ದಾರೆ. ಮಗಳ ಈ ನಿರ್ಧಾರದಿಂದ ತಮಗಾದ ನೋವನ್ನು ಹೊರಹಾಕಿದ್ದಾರೆ.

Advertisement

ಈ ಬಗ್ಗೆ ಮಾತನಾಡಿರುವ ಸಮಂತಾ ತಂದೆ ಜೋಸೆಫ್ ಪ್ರಭು, ಇಬ್ಬರ ನಡುವಿನ ವಿಚ್ಛೇದನದ ವಿಚಾರವಾಗಿ ತಮಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಈ ನಿರ್ಧಾರ ತಮಗೆ ಶಾಕ್ ತಂದರೂ ಸಹ, ತನ್ನ ಮಗಳು ಬಹಳ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದಿದ್ದಾರೆ.

ನಟ ನಾಗಾರ್ಜುನ ಅಕ್ಕಿನೇನಿ ಸಹ ತಮ್ಮ ಮಗ ಹಾಗೂ ಸೊಸೆಯ ವಿಚ್ಛೇದನದ ವಿಚಾರದ ಬಗ್ಗೆ ಮಾತನಾಡಿ, ಈ ಬೆಳವಣಿಗೆ ದುರದೃಷ್ಟಕರವಾಗಿದ್ದು, ಇಬ್ಬರಿಗೂ ದೇವರು ಶಕ್ತಿ ನೀಡಲಿ ಎಂದು ಆಶಿಸಿದ್ದಾರೆ. ಪತಿ – ಪತ್ನಿಯರ ನಡುವೆ ಏನಾಗುತ್ತದೋ ಅದೆಲ್ಲಾ ವೈಯಕ್ತಿಕವಾಗಿದ್ದು, ಅದು ಹಾಗೇ ಇರಬೇಕೆಂದ ನಾಗಾರ್ಜುನ, ಸ್ಯಾಮ್ ಹಾಗೂ ಆಕೆ ನಡುವೆ ಏನೇ ಆದರೂ ಇಬ್ಬರೂ ಸಹ ತಮ್ಮ ಪ್ರೀತಿಪಾತ್ರರಾಗೇ ಇರಲಿದ್ದಾರೆ ಎಂದಿದ್ದಾರೆ.

ಇನ್ನು ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನ ಕಡಿದುಕೊಂಡರು. ತಾವು ದೂರವಾಗುತ್ತಿರುವ ವಿಚಾರನ್ನು ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಂಡರು. ನಾಲ್ಕು ವರ್ಷಗಳ ವಿವಾಹ ಬಂಧನ ಅಂತ್ಯವಾಗಿದ್ದಕ್ಕೆ ಚೈ ಹಾಗೂ ಸ್ಯಾಮ್ ಅವರ ಅಭಿಮಾನಿಗಳಿಗೆ ದುಖಃವಾಯಿತು. ಈ ಜೋಡಿ ಡಿವೋರ್ಸ್ ಪಡೆಯಲು ಕಾರಣ ಏನು ಎಂಬುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next