Advertisement

ಮಾನ್ವಿತಾ ಮಾನ್ಯತಾ

09:07 AM May 20, 2018 | |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರವು ನೂರನೇ ದಿನದತ್ತ ಸಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅಲ್ಲದೆ ಇನ್ನೊಂದಿಷ್ಟು ಕಲಾವಿದರು ಸಹ ಗುರುತಿಸಿಕೊಂಡಿದ್ದು ವಿಶೇಷ. ಡಾಲಿ ಪಾತ್ರ ಮಾಡಿದ ಧನಂಜಯ್‌, ಕಾಕ್ರೋಚ್‌ ಪಾತ್ರದಲ್ಲಿ ಕಾಣಿಸಿಕೊಂಡ ಸುಧಿ, ಕಾನ್‌ಸ್ಟಬಲ್‌ ಸರೋಜ ಪಾತ್ರ ಮಾಡಿದ ತ್ರಿವೇಣಿ … ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರ ಜೊತೆಗೆ ದೊಡ್ಡ ಮಟ್ಟದಲ್ಲಿ ಗಮನಸೆಳೆದಿದ್ದು ಪುನರ್ವಸು ಪಾತ್ರ ಮಾಡಿರುವ ಮಾನ್ವಿತಾ ಹರೀಶ್‌. ಮಾನ್ವಿತಾ ಅವರ ಪಾತ್ರ ಅದ್ಯಾವ ಮಟ್ಟಿಗೆ ಹಿಟ್‌ ಆಯಿತು ಎಂದರೆ, ಒರಾಯನ್‌ ಮಾಲ್‌ನಲ್ಲಿ “ಟಗರು’ ಸಿನಿಮಾ ನೋಡಿದ ರಾಮ್‌ಗೊàಪಾಲ್‌ ವರ್ಮಾ, ಸಿನಿಮಾದ ಜೊತೆಗೆ ಮಾನ್ವಿತಾ ಹರೀಶ್‌ ನಟನೆಗೆ ಫೀದಾ ಆಗಿದ್ದಾರೆ. ಬರೀ ಅಷ್ಟೇ ಆಗಿಲ್ಲ. ವರ್ಮ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಆಕೆಗೆ ಅವಕಾಶ ನೀಡುವ ಜೊತೆಗೆ ಆಕೆ ಕೇಳುವುದಕ್ಕಿಂತ 10 ಲಕ್ಷ ರೂಪಾಯಿ ಹೆಚ್ಚು ಸಂಭಾವನೆ ಕೊಡುತ್ತೇನೆ ಎಂದು ಘೋಷಿಸಿದ್ದರು.

Advertisement

ರಾಮ್‌ ಗೋಪಾಲ್‌ ವರ್ಮ ನಿರ್ದೇಶನದ ಹೊಸ ಚಿತ್ರದಲ್ಲಿ ಮಾನ್ವಿತಾ ನಟಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ವರ್ಮ ಕೊಟ್ಟ ಆಫ‌ರ್‌ನಿಂದ ಮಾನ್ವಿತಾ ಬಹಳ ಥ್ರಿಲ್‌ ಆಗಿದ್ದರು. “”ನನಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಈ ಕ್ಷಣಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. “ಟಗರು’ ಚಿತ್ರದ ಯಶಸ್ಸಿನಲ್ಲಿ ನನಗೇನು ಸಿಗಬೇಕಿತ್ತು ಅದು ಸಿಕ್ಕಿದೆ. ಆ ತರಹದ ಮೆಚ್ಚುಗೆ ಒಬ್ಬ ದೊಡ್ಡ ನಿರ್ದೇಶಕರಿಂದ ಸಿಕ್ಕಾಗ ಯಾರು ತಾನೆ ಖುಚಯಾಗಲ್ಲ ಹೇಳಿ. ಫ್ರೆàಮ್‌ ಟು ಫ್ರೆàಮ್‌ ಅದ್ಭುತವಾಗಿ ಕಾಣಿಸಿಕೊಂಡಿದ್ದೀಯ ಎಂದು ಮೆಚ್ಚುಗೆ ಸೂಚಿಸಿದ್ದು ನನಗೆ ಸಿಕ್ಕ ದೊಡ್ಡ ಗೆಲುವು. ಈ ತರಹ ನನ್ನ ಬಗ್ಗೆ ಟ್ವೀಟ್‌ ಮಾಡಿರಲಿಲ್ಲ’ ಎಂದು ಮಾನ್ವಿತಾ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು.

ಮಾನ್ವಿತಾ ಅವರ ಮುಂದಿನ ನಡೆ ಏನಿರಬಹುದು? ಅವರು ಬಾಲಿವುಡ್‌ಗೆ ಹಾರುತ್ತಾರಾ ಎಂದು ಎಲ್ಲರೂ ಕುತೂಹಲದಿಂದ ಕಾಯುವಾಗಲೇ, ಮಾನ್ವಿತಾ ಎಲ್ಲರಿಗೂ ಒಂದು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಅದೇನೆಂದರೆ, ಮಾನ್ವಿತಾ ಈಗ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಕಳೆದ ತಿಂಗಳು ಜಪಾನ್‌ ಪ್ರವಾಸದಲ್ಲಿದ್ದ ನಾಗತಿಹಳ್ಳಿ ಚಂದ್ರಶೇಖರ್‌, ಬೆಂಗಳೂರಿಗೆ ಮರಳುವುದರ ಜೊತೆಗೆ ಒಂದು ಹೊಸ ಚಿತ್ರವನ್ನು ನಿರ್ದೇಶಿವುದಾಗಿ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಗುರುನಂದನ್‌ ನಾಯಕನಾಗಿ ನಟಿಸುತ್ತಿದ್ದು, ಗುರುನಂದನ್‌ಗೆ ನಾಯಕಿಯಾಗಿ ಮಾನ್ವಿತಾ ಅವರನ್ನು ಆಯ್ಕೆ ಮಾಡಿದ್ದಾರೆ ನಾಗತಿಹಳ್ಳಿ. ಇದಕ್ಕೂ ಮುನ್ನ ಸೂರಿ, ಆರ್‌. ಚಂದ್ರು ಮುಂತಾದ ಜನಪ್ರಿಯ ನಿರ್ದೇಶಕರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಾನ್ವಿತಾ, ಸಹಜವಾಗಿಯೇ ಖುಷಿಯಾಗಿದ್ದಾರೆ.

ಇದಕ್ಕೂ ಮುನ್ನ ಕನ್ನಡದ “ರಿಲ್ಯಾಕ್ಸ್‌ ಸತ್ಯ’, “ತಾರಕಾಸುರ’, “ಅರಿಷಡ್ವರ್ಗ’ ಚಿತ್ರಗಳು ಈ ಹಿಂದೆಯೇ ಅವರ ಅಕೌಂಟ್‌ನಲ್ಲಿತ್ತು. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಹೊಸ ಸಿನಿಮಾ ಸೇರಿ, ಮಾನ್ವಿತಾ ಅಕೌಂಟ್‌ನಲ್ಲಿ ಈಗ ನಾಲ್ಕು ಚಿತ್ರಗಳು ಸೇರಿದಂತಾಗಿದೆ. ಈಗಾಗಲೇ ನಾಲ್ಕರಲ್ಲಿ ಎರಡು ಚಿತ್ರಗಳನ್ನು ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ ಅವರು. ಇನ್ನು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಹೊಸ ಸಿನಿಮಾ ಇನ್ನಷ್ಟೇ ಶುರುವಾಗಬೇಕಿದೆ. ಅದಕ್ಕಾಗಿಯೇ ಲೊಕೇಶನ್‌ ಹುಡುಕುವುದಕ್ಕೆ ಲಂಡನ್‌ಗೆ ಹೋಗಲಿದ್ದಾರೆ ಮೇಷ್ಟ್ರು. ಏಕೆಂದರೆ, ಚಿತ್ರದ ಬಹುತೇಕ ಭಾಗ ಲಂಡನ್‌ನಲ್ಲಿ ನಡೆಯಲಿದೆಯಂತೆ. ಲೊಕೇಶನ್‌ ಹುಡುಕಿ ಬಂದ ನಂತರ ಬಹುಶಃ ಮುಂದಿನ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ಎಲ್ಲಾ ಸರಿ, ವರ್ಮ ನಿರ್ದೇಶನದ ಚಿತ್ರದಲ್ಲಿ ಮಾನ್ವಿತಾ ನಟಿಸುವುದು ಏನಾಯಿತು ಎಂಬ ಕೊನೆಯ ಪ್ರಶ್ನೆ ಬರಬಹುದು. ಈ ಪ್ರಶ್ನೆಗೆ ವರ್ಮ ಅವರೇ ಉತ್ತರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next