Advertisement

ನೀರ್‌ದೋಸೆ ಇಷ್ಟಪಟ್ಟವರಿಗೆ ಪೆಟ್ರೋಮ್ಯಾಕ್ಸ್‌ ಇಷ್ಟವಾಗುತ್ತೆ

12:29 PM Jan 04, 2021 | Team Udayavani |

ನಟಿ ಹರಿಪ್ರಿಯಾ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ “ಪೆಟ್ರೋಮ್ಯಾಕ್ಸ್‌’. ಹೌದು, ಹರಿಪ್ರಿಯಾ ನಾಯಕಿಯಾಗಿರುವ “ಪೆಟ್ರೋಮ್ಯಾಕ್ಸ್‌’ ಚಿತ್ರದ ಚಿತ್ರೀಕರಣ ಹೊಸ ವರ್ಷದ ಮೊದಲ ದಿನ ಮುಗಿದಿದೆ.  ಮೈಸೂರಿನಲ್ಲಿ ಆರಂಭವಾದ ಚಿತ್ರೀಕರಣ ಮೈಸೂರಿನಲ್ಲೇ ಮುಗಿದಿದೆ.

Advertisement

ಅಂದಹಾಗೆ, ವಿಜಯ ಪ್ರಸಾದ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ “ನೀರ್‌ದೋಸೆ’ ಚಿತ್ರ ನಿರ್ದೇಶಿಸಿರುವ ವಿಜಯ ಪ್ರಸಾದ್‌ ಚಿತ್ರದಲ್ಲಿ ಹರಿಪ್ರಿಯಾ ಮತ್ತೂಮ್ಮೆ ನಟಿಸುತ್ತಿದ್ದಾರೆ.

ಇದನ್ನೂ ಓದಿ : ತಮಿಳು ಸಿನಿಮಾದಲ್ಲಿ ಶಿವಣ್ಣ ನಟನೆ ಸಾಧ್ಯತೆ

ಚಿತ್ರದ ಬಗ್ಗೆ ಮಾತನಾಡುವ ನಾಯಕ ನಟಿ ಹರಿಪ್ರಿಯಾ, “ನಿರ್ದೇಶಕರು ಹೇಳಿದಂತೆ ಇದೊಂದು ಚೇಷ್ಟೆ ಇರುವಂಥ, ತಮಾಷೆಯಾಗಿ ಸಾಗುವಂಥ ಸಿನಿಮಾ. ಜೊತೆಗೆ ಎಮೋಶನ್‌ ಅಂಶಗಳಿವೆ. “ನೀರ್‌ ದೋಸೆ’ ಸಿನಿಮಾ ನೋಡಿ ಇಷ್ಟಪಟ್ಟವರಿಗೆ ಈ ಸಿನಿಮಾ ಕೂಡ ಇಷ್ಟವಾಗುತ್ತದೆ.  ಇದೊಂದು ಎಕ್ಸ್‌ಪೆರಿಮೆಂಟ್‌ ಸಿನಿಮಾ. ನನ್ನ ಸಿನಿಮಾ ಕರಿಯರ್‌ನಲ್ಲಿಯೇ ವಿಭಿನ್ನವಾದ ಪಾತ್ರವನ್ನು ಈ ಸಿನಿಮಾದಲ್ಲಿ ನಿಭಾಯಿಸಿದ್ದೇನೆ. ಚೇಷ್ಟೆ ಜತೆಗೆ ಅರ್ಥಪೂರ್ಣವಾದ ಕಥೆಯೂ ಈ ಸಿನಿಮಾದಲ್ಲಿದೆ. ಯೂಥ್ಸ್ ಮತ್ತು ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟಪಡುವಂಥ ಕಂಟೆಂಟ್‌ ಸಿನಿಮಾದಲ್ಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next