Advertisement

ಮೈಸೂರು: ದಕ್ಷಿಣ ಕಾಶಿ ನಂಜನಗೂಡಿಗೆ ನಟ ಯಶ್ ದಂಪತಿ‌ ಭೇಟಿ

01:57 PM Jun 21, 2023 | Team Udayavani |

ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಮೇತ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಅವರು ಇದು ನಮ್ಮ ಮನೆಯ ದೇವರು, ಕೊರೊನ ಬಂದ ಬಳಿಕ ಇಲ್ಲಿಗೆ ಬಂದಿರಲಿಲ್ಲ, ಹಾಗಾಗಿ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆಯಲು ಬಂದಿದ್ದೇವೆ ಬೇರೆ ಯಾವುದೇ ಹರಕೆ ಇರಲಿಲ್ಲ ಎಂದು ಹೇಳಿದರು.

Advertisement

ಕಳೆದ ಮೂರು ದಿನಗಳಿಂದ ಮೈಸೂರು ಭಾಗದಲ್ಲಿ ಪ್ರವಾಸ ಮಾಡುತ್ತಿರುವ ಯಶ್ ಹಾಗೂ ರಾಧಿಕಾ ಪಂಡಿತ್. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡೆಸಿದ್ದು, ಇಂದು ಶ್ರೀಕಂಠೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಶ್ರೀಘ್ರದಲ್ಲೇ ಮುಂದಿನ ಚಿತ್ರ ಅನೌನ್ಸ್ ಮಾಡುವೆ:
ಸಿನಿಮಾ ಕುರಿತಾಗಿ ಮಾತನಾಡಿದ ಯಶ್ ‘ದೇವರ ಸನ್ನಿಧಿಯಲ್ಲಿ ಇದ್ದೀನಿ ಸುಖಾ ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಯಾರೂ ಉಚಿತವಾಗಿ ಸಿನಿಮಾ ನೋಡುವುದಿಲ್ಲ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು ಎಂಬ ನಿಲುವು ನನ್ನದು. ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ. ಸಿನಿಮಾಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಸ್ಕ್ರಿಪ್ಟ್ ಕೂಡ ಸಿದ್ಧವಾಗ್ತಿದೆ, ಆದಷ್ಟು ಬೇಗ ಹೊಸ ಚಿತ್ರದ ಮಾಹಿತಿ ನೀಡುವೆ ಎಂದು ಹೇಳಿದರು.

ಬಾಲಿವುಡ್‌ಗೆ ಹೋಗುವ ವಿಚಾರ:
ಯಶ್ ಬಾಲಿವುಡ್ ಗೆ ಹೋಗುತ್ತಾರೆ ಎಂಬ ಸುದ್ದಿಗಳು ಹೆಚ್ಚಿನ ಕಡೆಗಳಲ್ಲಿ ಕೇಳಿಬರುತ್ತಿದೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯಶ್ ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ, ನಾನು ಎಲ್ಲೂ ಹೋಗುವುದಿಲ್ಲ ಡೋಂಟ್ ವರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶ್ರೇಯಂಕಾ, ಮನ್ನತ್ ಸ್ಪಿನ್ ಮ್ಯಾಜಿಕ್‌: ಭಾರತದ ಮಡಿಲಿಗೆ ಎಮರ್ಜಿಂಗ್ ಏಷ್ಯಾ ಕಪ್ ಪಟ್ಟ

Advertisement
Advertisement

Udayavani is now on Telegram. Click here to join our channel and stay updated with the latest news.

Next