Advertisement

ಹೊಸಪೇಟೆ: ನಟ ಶಿವಣ್ಣನಿಂದ ಅಪ್ಪು ಪುತ್ಥಳಿಗೆ ಗೌರವ; ಕಿಕ್ಕಿರಿದ ಅಭಿಮಾನಿಗಳು

04:03 PM Dec 15, 2022 | Team Udayavani |

ಹೊಸಪೇಟೆ: ನಟ ಶಿವರಾಜ್‌ಕುಮಾರ್, ನಗರದ ಪುನೀತ್ ರಾಜಕುಮಾರ್ ಕಂಚಿನ ಪುತ್ಥಳಿಗೆ ಗುರುವಾರ (ಡಿ.15) ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Advertisement

ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿರುವ ಶಿವರಾಜ್‌ಕುಮಾರ್ ಅಭಿನಯದ 125ನೇ ಚಿತ್ರ ವೇದ ಚಿತ್ರದ ಕುರಿತು ಪತ್ರಕರ್ತರೊಂದಿಗೆ ಸಂವಾದ ನಡೆಸುವ ಹಿನ್ನೆಲೆ ಹೊಸಪೇಟೆಗೆ ಆಗಮಿಸಿದ್ದ ನಟ ಶಿವರಾಜ್‌ಕುಮಾರ್ ದಂಪತಿ ನಗರದ ಅಪ್ಪು ವೃತ್ತಕ್ಕೆ ಆಗಮಿಸಿ, ಪುನೀತ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರೀತಿಯ ಸಹೋದರನ ಪ್ರತಿಮೆಗೆ ತೆಂಗಿನಕಾಯಿ ಒಡೆದು, ದೇವರಿಗೆ ಸಲ್ಲಿಸುವಂತೆ ಮಂಗಳಾರತಿ ಮಾಡಿದರು. ಈ ವೇಳೆ ಮಂಗಳಾರತಿ ತಟ್ಟೆಯನ್ನು ತಿರುಗಿಸಿ, ಅಭಿಮಾನಿಗಳಿಗೂ ಮಂಗಳಾರತಿ ಸಲ್ಲಿಸಿದರು.

ನಟ ಶಿವರಾಜ್‌ಕುಮಾರ್ ಆಗಮನದ ಸುದ್ದಿ ತಿಳಿಯುತ್ತಿದಂತೆ ಅಭಿಮಾನಿಗಳು ಪುನೀತ್ ವೃತ್ತದಲ್ಲಿ ಕಿಕ್ಕಿರಿದು ನಿಂತಿದ್ದರು. ಶಿವರಾಜ್‌ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಭಿಮಾನಿಗಳು ಶಿವಣ್ಣ ಅವರ ಮೇಲೆ ಹೂವಿನ ಮಳೆ ಸುರಿಸಿದರು. ಶಿವಣ್ಣ ಕೂಡ ಅಭಿಮಾನಿಗಳತ್ತ ಕೈ ಬೀಸಿ ಅಭಿಮಾನ ಮೆರೆದರು. ಈ ಸಂದರ್ಭದಲ್ಲಿ ಯುವ ಮುಖಂಡ ಸಿದ್ಧಾರ್ಥ್ ಸಿಂಗ್, ಶಿವರಾಜ್ ಕುಮಾರ್ ಅವರಿಗೆ ಶಾಲು ಹೊದೆಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬನಾಥ, ವೇದ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಪತ್ರಕರ್ತ ಸತೀಶ್ ಬಿಲ್ಲಾಡಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಆನಂದ್ ಸಿಂಗ್ ಪುತ್ರಿ ಯಶ್ವಸಿನಿ ಸಿಂಗ್ ಅಪ್ಪು ಅಭಿಮಾನಿಗಳಾದ ಕಿಚಿಡಿ ವಿಶ್ವ, ಜೋಗಿ ತಾಯಪ್ಪ ಇನ್ನಿತರರಿದ್ದರು.

ಕಾರು ಚಾಲನೆ ಮಾಡಿದ ಶಿವಣ್ಣ:

Advertisement

ನಗರದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶಿವುರಾಜ್‌ಕುಮಾರ್ ಸ್ವತಃ ಅವರೇ ಕಾರು ಚಾಲನೆ ಮಾಡಿಕೊಂಡು ಅಪ್ಪು ವೃತ್ತಕ್ಕೆ ಆಗಮಿಸಿದರು. ನಟ ಪುನೀತ್ ಪ್ರತಿಮೆಗೆ ಮಾಲಾರ್ಪಾಣೆ ಸಲ್ಲಿಸಿ ಬಳಿಕ ಪತ್ನಿ ಗೀತಾಶಿವರಾಜ್ ರೊಂದಿಗೆ ತಾವೇ ಕಾರು ಚಾಲನೆ ಮಾಡಿಕೊಂಡು ಹೋಟೆಲಿನತ್ತ ಸಾಗಿದರು.

ಅಭಿಮಾನಿಗಳಿಂದ ಸೆಲ್ಫಿ:

ಶಿವರಾಜ್‌ಕುಮಾರ ಅಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿದಂತೆ ಅಪ್ಪು ಅಪ್ಪು ಎಂದು ಅಪ್ಪು ಅಭಿಮಾನಿಗಳು ಘೋಷಣೆ ಮೊಳಗಿಸಿದರು. ಕೆಲ ಅಭಿಮಾನಿಗಳು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರೆ ಇನ್ನೂ ಕೆಲವರು ಕರ್ನಾಟಕ ಭಾವುಟ ಹಾಗೂ ಅಪ್ಪು ಭಾವಚಿತ್ರ ಕೈಯಲ್ಲಿ ಹಿಡಿದು ಖುಷಿ ಪಟ್ಟರು.

ಅಂಧ ಮಕ್ಕಳಿಂದ ಪ್ರಾರ್ಥನೆ:

ಶಿವುರಾಜ್ ಕುಮಾರ್ ಆಗಮನದ ಸುದ್ದಿ ತಿಳಿಯುತ್ತಲೇ ನಗರದ ವಿಶ್ವಚೇತನ ಅಂಧ ಮಕ್ಕಳ ವಸತಿ ಶಾಲೆಯ ಮಕ್ಕಳು ಅಪ್ಪು ಪ್ರತಿಮೆ ಮುಂದೆ ಕಾಯುತ್ತಿದ್ದರು. ಶಿವಣ್ಣ ಆಗಮಿಸುತ್ತಿಂದತೆ ಪ್ರಾರ್ಥನೆ ಸಲ್ಲಿಸಿ, ನಟ ಪುನೀತ್ ರಾಜಕುಮಾರ್ ಅವರನ್ನು ನೆನೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next