Advertisement

ಕೆಕೆಆರ್‌ ಕಳಪೆ ಆಟಕ್ಕೆ ಶಾರುಖ್‌ ಕ್ಷಮೆ

07:50 AM May 11, 2018 | |

ಕೋಲ್ಕತಾ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ತಂಡಸ್ಫೂರ್ತಿಯಿಂದ ಆಡದೇ ಹೀನಾಯವಾಗಿ ಸೋತದ್ದಕ್ಕೆ ಕೋಲ್ಕತಾ ನೈಟ್‌ರೈಡರ್ ತಂಡದ ಮಾಲಕ, ಬಾಲಿವುಡ್‌ ನಟ ಶಾರುಖ್‌ ಖಾನ್‌ ತೀವ್ರ ಅಸಮಾಧಾನ ಗೊಂಡಿದ್ದಾರೆ. ಮಾತ್ರವಲ್ಲ ತಂಡದ ಒಟ್ಟಾರೆ ಕಳಪೆ ಪ್ರದರ್ಶನಕ್ಕೆ ಅವರು ಕ್ರಿಕೆಟ್‌ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

Advertisement

ಕೋಲ್ಕತಾ ತಂಡ ಬುಧವಾರ ತವರಿನಲ್ಲೇ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 102 ರನ್‌ಗಳ ಭಾರೀ ಅಂತರದಿಂದ ಸೋಲು ಕಂಡಿತ್ತು. ಆರಂಭದಲ್ಲಿ ಕೆಲವು ಪಂದ್ಯಗಳನ್ನು ಗೆದ್ದು ಭರ್ಜರಿ ಆರಂಭ ಮಾಡಿದ್ದ ದಿನೇಶ್‌ ಕಾರ್ತಿಕ್‌ ನೇತೃತ್ವದ ಕೆಕೆಆರ್‌ ತಂಡ ಈಗೀಗ ಕಳಪೆ ಪ್ರದರ್ಶನ ನೀಡಲು ಆರಂಭಿಸಿದೆ. ಅಷ್ಟೇ ಅಲ್ಲ, ಸತತ ಸೋಲಿನ ಸುಳಿಗೆ ಸಿಲುಕಿ ಕೂಟದಿಂದಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ. ಸಹಜವಾಗಿಯೇ ಇದು ಶಾರುಖ್‌ ಅವರನ್ನು ಚಿಂತೆಗೀಡು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next