Advertisement

ರೈಡರ್ ಬಿಡುಗಡೆ ಮುನ್ನವೇ ಮತ್ತೊಂದು ಬಿಗ್ ಸಿನಿಮಾದಲ್ಲಿ ನಿಖಿಲ್

02:43 PM Jun 24, 2021 | Team Udayavani |

ಬೆಂಗಳೂರು: ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರ ಸ್ವಾಮಿ ಜಾಗ್ವಾರ ಹಾಗೂ ಸೀತಾರಾಂ ಕಲ್ಯಾಣ ಸಿನಿಮಾ ಬಳಿಕ ರೈಡರ್ ಚಿತ್ರದಲ್ಲಿ ನಟಿಸುತ್ತಿರುವುದು ಸಿನಿರಸಿಕರಿಗೆ ಗೊತ್ತಿರುವ ವಿಚಾರ. ಈಗಾಗಲೇ ವಿಭಿನ್ನ ಲುಕ್ ಗಳ ಮೂಲಕ ರೈಡರ್ ಸಿನಿಮಾ ಸ್ಯಾಂಡಲ್ವುಡ್ ನಲ್ಲಿ ನಿರೀಕ್ಷೆಗಳ ಮಹಾಪೂರ ಹುಟ್ಟಿಸಿದೆ. ಈ ಚಿತ್ರ ತೆರೆಗೆ ಬರುವ ಮುನ್ನವೆ ನಿಖಿಲ್ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ರೆಡಿಯಾಗಿದ್ದಾರೆ.

Advertisement

ಹೌದು, ಜಾಗ್ವಾರ್ ನಾಯಕನ ಮುಂದಿನ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಇನ್ನೂ ಹೆಸರಡಿದ  ಈ ಚಿತ್ರಕ್ಕೆ  ಚೊಚ್ಚಲ ನಿರ್ದೇಶಕ ಮಂಜು ಅಥರ್ವ ಆಕ್ಷನ್ ಕಟ್ ಹೇಳಲಿದ್ದಾರೆ. ಇವರು ಈಗಾಗಲೇ ಹಲವು ದೊಡ್ಡ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಅಥರ್ವ ಅವರು ಮಂಜು ಮಾಂಡವ್ಯ, ನರ್ತನ್, ಹಾಗೂ ಜೋಗಿ ಪ್ರೇಮ್ ಮತ್ತು ತಮಿಳು ನಿರ್ದೇಶಕ ಕಾತಿರ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಇನ್ನು ಇದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ, ನಿರ್ದೇಶನದ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆ ಕೂಡ ಬರೆದಿದ್ದಾರೆ ಮಂಜು . ನಿಖಿಲ್ ಮತ್ತು ಕೆವಿಎನ್ ಪ್ರೊಡಕ್ಷನ್ ಜೊತೆ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ, ಸಿನಿಮಾ ತಂಡ ಉತ್ತಮ ತಂತ್ರಜ್ಞರನ್ನು ಹೊಂದಿದೆ ಎಂದು ಮಂಜು ತಿಳಿಸಿದ್ದಾರೆ, ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next