Advertisement

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

02:48 PM Mar 29, 2024 | Team Udayavani |

ಮುಂಬಯಿ: ಖ್ಯಾತ ಬಾಲಿವುಡ್‌ ನಟ, ಕಾಂಗ್ರೆಸ್‌ನ ಮಾಜಿ ಸಂಸದ ಗೋವಿಂದ ಅವರು ಗುರು ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಸಮ್ಮುಖದಲ್ಲಿ ಶಿವಸೇನೆ(ಶಿಂಧೆ ಬಣ) ಸೇರ್ಪಡೆಗೊಂಡರು.

Advertisement

ಈ ಮೂಲಕ ಹೀರೋ ನಂ.1 ಎಂದೇ ಖ್ಯಾತರಾಗಿರುವ ಗೋವಿಂದ ಅವರು ತಮ್ಮ 14 ವರ್ಷಗಳ “ರಾಜಕೀಯ ವನವಾಸ’ವನ್ನು ಅಂತ್ಯಗೊಳಿಸಿದ್ದಾರೆ. ಇದೇ ವೇಳೆ, ನಟ ಗೋವಿಂದ ಅವರನ್ನು ಸಿಎಂ ಶಿಂಧೆ ಪಕ್ಷದ ಸ್ಟಾರ್‌ ಪ್ರಚಾರಕರನ್ನಾಗಿ ಘೋಷಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗೋವಿಂದ, ರಾಜಕೀಯಕ್ಕೆ ಮರು ಪ್ರವೇಶ ಮಾಡುವ ಕಲ್ಪನೆಯೂ ಇರಲಿಲ್ಲ ಎಂದರು.

2004ರಲ್ಲಿ ಮುಂಬಯಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಇವರು, ಪ್ರತಿಸ್ಪರ್ಧಿ ಬಿಜೆಪಿಯ ರಾಮ್‌ ನಾಯಕ್‌ರನ್ನು ಭಾರೀ ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಅವ ರಿಗೆ ಬಿಜೆಪಿ ಮುಂಬಯಿ ವಾಯವ್ಯ ಕ್ಷೇತ್ರದ ಟಿಕೆಟ್‌ ನೀಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next