Advertisement

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

12:21 AM Sep 17, 2024 | Team Udayavani |

ಬಳ್ಳಾರಿ: ಕೆಲವು ದಿನಗಳ ಹಿಂದೆ ಅನಾಮಧೇಯ ವ್ಯಕ್ತಿಯಿಂದ ಹನುಮಾನ್‌ ಚಾಲೀಸಾ ಪುಸ್ತಕ ಬಂದಿದ್ದ ದರ್ಶನ್‌ಗೆ ಇದೀಗ ವಕೀಲರೊಬ್ಬರಿಂದ ಪತ್ರ ಬಂದಿದ್ದು, ಮುಂದಿನ ಕಾನೂನು ಹೋರಾಟ ಹೇಗೆ ಮಾಡಬೇಕು ಎಂಬ ಕುರಿತು ಸಲಹೆ, ಸೂಚನೆ ನೀಡಿದ್ದಾರೆ.

Advertisement

ಪತ್ರ ಬರೆದಿರುವ ವಕೀಲರು ಯಾರು, ಏಕೆ ಬರೆದಿದ್ದಾರೆ ಎನ್ನುವುದು ಕುತೂಹಲ ಮೂಡಿದೆ. ಕೊಲೆ ಪ್ರಕರಣಕ್ಕೂ ಮುನ್ನ ಹಲವು ವಿವಾದಗಳನ್ನು ಎದುರಿಸಿದ್ದ ದರ್ಶನ್‌ಗೆ, ವಿವಾದಗಳಿಂದ ಹೇಗೆ ಹೊರ ಬರಬೇಕು. ಕಾನೂನು ಹೋರಾಟವನ್ನು ಹೇಗೆ ಮಾಡಬೇಕು ಎಂಬ ಸಲಹೆ ಸೂಚನೆ ಗಳನ್ನು ಪತ್ರದಲ್ಲಿ ನೀಡಲಾಗಿದೆ.

ವಿಟಮಿನ್‌ ಮಾತ್ರೆ ನೀಡಿಲ್ಲ
ದರ್ಶನ್‌ಗೆ ನೀಡುವಂತೆ ಆತನ ಪತ್ನಿ ವಿಜಯಲಕ್ಷ್ಮಿ ವಿಟಮಿನ್‌ ಮಾತ್ರೆಗಳನ್ನು ತಂದುಕೊಟ್ಟಿದ್ದರು. ಆದರೆ ನಾವು ಇನ್ನೂ ನೀಡಿಲ್ಲ. ಈ ಕುರಿತು ವೈದ್ಯರ ಗಮ ನಕ್ಕೆ ತರ ಲಾಗಿದೆ. ವೈದ್ಯರು ಪರಿಶೀಲಿಸಿದ ಬಳಿಕ ಅಗತ್ಯವಿದ್ದರೆ ಮಾತ್ರ ನೀಡಲಾಗುತ್ತದೆ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next