Advertisement

Actor Darshan: ಸಂಬಂಧಿಕರು ಸೇರಿ 30 ಮಂದಿಯಿಂದ ಈವರೆಗೆ ಜೈಲಿನಲ್ಲಿ ನಟ ದರ್ಶನ್‌ ಭೇಟಿ

09:35 AM Aug 06, 2024 | Team Udayavani |

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿ ಒಂದೂವರೆ ತಿಂಗಳು ಆಗಿದ್ದು, ಅವರನ್ನು ಕುಟುಂಬ ಸದಸ್ಯರು ಸೇರಿ ಇದುವರೆಗೂ 30 ಮಂದಿ ಭೇಟಿಯಾಗಿದ್ದಾರೆ.

Advertisement

ಜೂನ್‌ 25ರಿಂದ ಜುಲೈ 26ರ ಅವಧಿಯಲ್ಲಿ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್‌ ಸೇರಿ 30 ಮಂದಿ ಭೇಟಿಯಾಗಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ನಾಲ್ಕು ಬಾರಿ, ದರ್ಶನ್‌ ತಾಯಿ ಮೀನಾ ಒಂದು ಸಲ, ತಮ್ಮ ದಿನಕರ್‌ 3 ಸಲ ಭೇಟಿ ನೀಡಿರುವುದು ಆರ್‌ಟಿರ್‌ ಅರ್ಜಿಯಲ್ಲಿ ದರ್ಶನ್‌ ಭೇಟಿಯಾದವರ ಪಟ್ಟಿ ಬೆಳಕಿಗೆ ಬಂದಿದೆ.

ಯಾವ ದಿನ ಯಾರು ಭೇಟಿ?: ಜೂ.24ರಂದು ಪತ್ನಿ ವಿಜಯಲಕ್ಷ್ಮೀ  29ರಂದು ನಟಿ ರಕ್ಷಿತಾ, ಜು.1ರಂದು ದರ್ಶನ್‌ ತಾಯಿ, ತಮ್ಮ ದಿನಕರ್‌, 2ರಂದು ಸಮತಾ, 10 ರಂದು ಪತ್ನಿ ವಿಜಯಲಕ್ಷ್ಮೀ ಮಗ ಸುಶಾಂತ (ಸಂಬಂಧಿ), ಚಂದ್ರಶೇಖರ್‌ (ಅಳಿಯ), 11ರಂದು ನಟ ಧನ್ವಿರ್‌, ಚಂದ್ರಶೇಖರ್‌, ನಾಗೇಶ್‌, ಸುನೀಲ್‌, ಶಿವಕುಮಾರ ಭೇಟಿ. 15ರಂದು ಪತ್ನಿ ವಿಜಯಲಕ್ಷ್ಮೀ ನಿತೀನ್‌, ದಿನಕರ್‌, ಅನುಶ್‌ ಶೆಟ್ಟಿ. 19ರಂದು ಶಾಸಕ ದರ್ಶನ್‌ ಪುಟ್ಣಣ್ಣಯ್ಯ, ರಾಘವ, ತರುಣ್‌ ಕಿಶೋರ್‌, ಹೇಮಂತ, ನವೀನ, ಕಿರ್ತನ್‌, ಕುಮಾರ್‌, 22ರಂದು ವಿನೋದ್‌, ದಿನಕರ್‌, ಸುಶಾಂತ ನಾಯ್ಡು, ಶ್ರೀನಿ  ವಾಸ್‌, ಪತ್ನಿ ವಿಜಯಲಕ್ಷ್ಮೀ, 26ರಂದು ನಟ ಸಾಧುಕೋಕಿಲ ಸೇರಿ 30 ಮಂದಿ ಭೇಟಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next