Advertisement

ಮುಂಬಯಿ: ಕ್ಯಾಬ್ ಚಾಲಕ ಅನುಚಿತವಾಗಿ ವರ್ತಿಸಿದ ಕುರಿತು ನಟಿ ದೂರು

03:05 PM Oct 16, 2022 | Team Udayavani |

ಮುಂಬಯಿ: ಮನೆಗೆ ಹೋಗುತ್ತಿದ್ದ ವೇಳೆ ಉಬರ್ ಕ್ಯಾಬ್ ಚಾಲಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿದ್ದಾನೆ ಎಂದು ಚಲನಚಿತ್ರ ನಟಿ ಮತ್ತು ನಿರ್ದೇಶಕಿ ಮಾನವಾ ನಾಯಕ್ ಆರೋಪಿಸಿದ್ದಾರೆ.

Advertisement

ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ ಶನಿವಾರ ಸಂಜೆ ನಡೆದ ಘಟನೆಯ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ಭೂತ ಬಂಗಲೆಯಲ್ಲೇ ನೆಲೆಸಿದ್ದ ಖ್ಯಾತ ಜಾದೂಗಾರ ಓಂ ಪ್ರಕಾಶ್ ಶರ್ಮಾ ನಿಧನ

ಮುಂಬೈನ ಕಾನೂನು ಮತ್ತು ಸುವ್ಯವಸ್ಥೆ ಜಂಟಿ ಪೊಲೀಸ್ ಕಮಿಷನರ್ ವಿಶ್ವಾಸ್ ನಂಗ್ರೆ ಪಾಟೀಲ್ ಪೋಸ್ಟ್‌ಗೆ ಉತ್ತರಿಸಿದ್ದು, ನಗರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ತಪ್ಪಿತಸ್ಥನ ವಿರುದ್ಧ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಾಯಕ್ ಅವರ ಪೋಸ್ಟ್ ಪ್ರಕಾರ, ಅವರು ಮನೆಗೆ ಹೋಗಲು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿಂದ ರಾತ್ರಿ 8.15 ಕ್ಕೆ ಕ್ಯಾಬ್ ಏರಿ ಪ್ರಯಾಣ ಆರಂಭಿಸಿದ್ದಾರೆ.ಡ್ರೈವರ್ ಚಾಲನೆ ಮಾಡುತ್ತಿದ್ದಾಗ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ್ದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಚಾಲಕ ಸಿಗ್ನಲ್ ಜಂಪ್ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದು, ಇದಕ್ಕಾಗಿ ಟ್ರಾಫಿಕ್ ಪೊಲೀಸ್ ಕ್ಯಾಬ್ ಅನ್ನು ನಿಲ್ಲಿಸಿ ಫೋಟೋ ಕ್ಲಿಕ್ ಮಾಡಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Advertisement

ಚಾಲಕ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ಆರಂಭಿಸಿದ್ದು, ನಂತರಟಿ ಮಧ್ಯಪ್ರವೇಶಿಸಿ, ವಾಹನದ ಚಿತ್ರವನ್ನು ಕ್ಲಿಕ್ ಮಾಡಿದ್ದರಿಂದ ವಾಹನವನ್ನು ಚಲಿಸಲು ಅವಕಾಶ ನೀಡುವಂತೆ ಟ್ರಾಫಿಕ್ ಪೊಲೀಸರನ್ನು ಕೇಳಿದರು. ಕ್ಯಾಬ್ ಡ್ರೈವರ್ ಕೋಪಗೊಂಡು ನಾಯಕ್‌ಗೆ 500 ರೂ ದಂಡವನ್ನು ಪಾವತಿಸುತ್ತೀರಾ ಎಂದು ಕಿರುಚಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಬರೆಯಲಾಗಿದೆ.

ನಟಿ ಚಾಲಕನಿಗೆ ಕ್ಯಾಬ್ ಅನ್ನು ಪೊಲೀಸ್ ಠಾಣೆಗೆ ಹೋಗಲು ಹೇಳಿದ್ದು,, ಆದರೆ ಅವನು ಕತ್ತಲೆಯ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ, ನಂತರ ವಾಹನವನ್ನು ವೇಗಗೊಳಿಸಿ ಚುನಭಟ್ಟಿ ರಸ್ತೆ ಮತ್ತು ಪ್ರಿಯದರ್ಶನಿ ಪಾರ್ಕ್ ನಡುವಿನ ಮಾರ್ಗದ ಕಡೆಗೆ ಹೊರಟಿದ್ದಾನೆ. ಕೂಡಲೇ ನಾಯಕ್ ಅವರು ಉಬರ್ ಸೇಫ್ಟಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಹೆಲ್ಪ್‌ಲೈನ್ ಕಾರ್ಯನಿರ್ವಾಹಕರು ತಮ್ಮೊಂದಿಗೆ ಕರೆ ಮಾಡುತ್ತಿದ್ದರಿಂದ, ಚಾಲಕ ಮತ್ತೆ ಕ್ಯಾಬ್ ವೇಗವನ್ನು ಹೆಚ್ಚಿಸಿದ್ದಾನೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನಾಯಕ್ ಅವರು ಚಾಲಕನನ್ನು ನಿಲ್ಲಿಸಲು ಹೇಳಿದರೂ ಕೇಳದೆ ಬೇರೊಬ್ಬರಿಗೆ ಕರೆ ಮಾಡಲು ಪ್ರಾರಂಭಿಸಿದನು. ಹೆದರಿ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದು, ಮೋಟಾರು ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮತ್ತು ಆಟೋರಿಕ್ಷಾ ಚಾಲಕ ಕ್ಯಾಬ್ ಚಾಲಕನನ್ನು ಹಿಂಬಾಲಿಸಿದ್ದು, ಆ ಬಳಿಕ ರಕ್ಷಿಸಲಾಯಿತು ಎಂದು ನಟಿ ಹೇಳಿಕೊಂಡಿದ್ದಾರೆ.

“ನಾನು ಸುರಕ್ಷಿತವಾಗಿದ್ದೇನೆ ಆದರೆ ಖಂಡಿತವಾಗಿಯೂ ಹೆದರುತ್ತೇನೆ” ಎಂದು ನಾಯಕ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next