Advertisement

Bangalore: ಕಸ ವಿಚಾರಕ್ಕೆ ನಟನ ಮೇಲೆ ಹಲ್ಲೆ; ಕೇಸ್‌ ದಾಖಲು

11:32 AM Mar 10, 2024 | Team Udayavani |

ಬೆಂಗಳೂರು: ಖಾಲಿ ಜಾಗದಲ್ಲಿ ಕಸ ಇಟ್ಟಿದ್ದಕ್ಕೆ  ‌ಪಕ್ಕದ ಮನೆಯವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕಿರುತೆರೆ ನಟರೊಬ್ಬರು ಅನ್ನ ಪೂರ್ಣೇ ಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಟ ಚರಿತ್‌ ಬಾಲಪ್ಪ ಎಂಬವರು ಪಕ್ಕದ ಮನೆ ನಿವಾಸಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಅನ್ನಪೂರ್ಣೇಶ್ವರಿ ನಗರದ ಡಿ.ಗ್ರೂಪ್‌ ಲೇಔಟ್‌ನಲ್ಲಿ ವಾಸವಿರುವ ಚರಿತ್‌, ಫೆ.23ರಂದು ಶೂಟಿಂಗ್‌ ನಿಮಿತ್ತ ಹೈದ್ರಾಬಾದ್‌ಗೆ ತೆರಳುವ ತರಾತುರಿಯಲ್ಲಿ ತಮ್ಮ ಮನೆಯ ಕಸವನ್ನು ಮನೆ ಪಕ್ಕದ ಖಾಲಿ ಜಾಗದಲ್ಲಿ ಇಟ್ಟಿದ್ದಾರೆ. ಅದನ್ನು ಗಮನಿಸಿದ ಪಕ್ಕದ ಮನೆಯ ನಿವಾಸಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ, ನಿಂದಿಸಿದ್ದಾರೆ.

ಈ ವೇಳೆ ನಟ ಹಾಗೂ ಆರೋಪಿತ ವ್ಯಕ್ತಿ ನಡುವೆ ವಾಗ್ವಾದ ಶುರುವಾಗಿದ್ದು, ಆಗ ಅಪರಿಚಿತ ವ್ಯಕ್ತಿ ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಮ್ಮ ಎಡಗೈ ಕಿರುಬೆರಳಿಗೆ ಗಾಯ ಮಾಡಿದ್ದಾನೆ. ಶೂಟಿಂಗ್‌ ನಿಮಿತ್ತ ಹೈದ್ರಾಬಾದ್‌ಗೆ ತೆರಳಿದ್ದರಿಂದ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನಟ ಚರಿತ್‌ ಬಾಲಪ್ಪ ತಮ್ಮ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next