Advertisement

ಉಡುಪಿ: ಬೈಕ್‌ ಸವಾರರಿಂದ ಮಹಿಳೆಯ ಸರ ಲಪಟಾವಣೆ

09:54 AM Jun 27, 2019 | keerthan |

ಉಡುಪಿ: ಬೈಕ್‌ನಲ್ಲಿ ಬಂದು ಮಹಿಳೆಯ ಸರ ಎಗರಿಸಿ ಪರಾರಿಯಾದ ಘಟನೆ ಜೂ.25ರಂದು ನಗರದ ಆದರ್ಶ ಆಸ್ಪತ್ರೆ ಬಳಿ ಸಂಭವಿಸಿದೆ.

Advertisement

ವಿದ್ಯಾ ನಾಯ್ಕ ಮತ್ತು ಹೇಮಾ ಅವರು ರಾತ್ರಿ 10.30ಕ್ಕೆ ವೈದ್ಯರ ಭೇಟಿಗಾಗಿ ಬಂದು ತಮ್ಮ ವಾಹನವನ್ನು ಆದರ್ಶ ಆಸ್ಪತ್ರೆ ಎದುರಿನ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿ ಆಸ್ಪತ್ರೆ ಗೇಟಿನ ಮುಂಭಾಗದಲ್ಲಿ ರಸ್ತೆ ದಾಟುವ ಸಮಯದಲ್ಲಿ ಹಿಂಭಾಗದಿಂದ ಬಂದ ಬೈಕ್‌ ಇವರನ್ನು ದಾಟಿ ಮುಂದೆ ಹೋಗಿ ಮತ್ತೆ ವಾಪಸು ಬಂತು.

ಅದರಲ್ಲಿ ಇದ್ದ ಇಬ್ಬರು ಅಪರಿಚಿತರು ವಿದ್ಯಾ ನಾಯ್ಕ ಅವರ ಕುತ್ತಿಗೆಯಲ್ಲಿದ್ದ ಅಂದಾಜು 19,000 ರೂ. ಮೌಲ್ಯದ ಚಿನ್ನದ ಸರ ಎಳೆದು ಪರಾರಿಯಾದರು ಎಂದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next