Advertisement

ಆ್ಯಕ್ಟಿವಾಕ್ಕೆ ಲಾರಿ ಢಿಕ್ಕಿ: ಮಹಿಳೆ ಸಾವು

12:30 AM Jan 18, 2019 | Team Udayavani |

ಬಸ್ರೂರು: ಕುಂದಾಪುರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಮೂಡ್ಲಕಟ್ಟೆ ಸಮೀಪದ ಮಾರ್ಗೋಳಿ ಬಳಿಯಲ್ಲಿ ಗುರುವಾರ ಸಂಜೆ ಲಾರಿ ಢಿಕ್ಕಿ ಹೊಡೆದು ಆ್ಯಕ್ಟಿವಾದಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ.

Advertisement

ಕೋಡಿ ನಿವಾಸಿ ಹಾಜಿ ಸಾಹೇಬ್‌ ಅವರ ಪತ್ನಿ ಮೈಮುನಾ (65) ಮೃತರು.ಇವರು ಗುಲ್ವಾಡಿಯಲ್ಲಿರುವ ತಾಯಿ ಮನೆಗೆ ಹೋಗಿ ಬಸ್ರೂರು ಸಮೀಪದ ಮಾರ್ಗೋಳಿಯಲ್ಲಿರುವ ದರ್ಗಾಕ್ಕೆ ತೆರಳಿದ್ದರು. ಬಳಿಕ ಕುಂದಾಪುರದ ಕೋಡಿಯ ಮನೆಗೆ  ಪತಿ ಜತೆ ಹೋಂಡಾ ಆ್ಯಕ್ಟಿವಾದಲ್ಲಿ ಹೋಗುತ್ತಿದ್ದಾಗ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. 

ಛಿದ್ರಗೊಂಡ ದೇಹ ಢಿಕ್ಕಿಯ ರಭಸಕ್ಕೆ ಮಹಿಳೆಯ ದೇಹ ಛಿದ್ರಗೊಂಡಿದೆ. ದೇಹದ ತುಣುಕುಗಳು ಲಾರಿಯ ಚಕ್ರದಲ್ಲಿ ಸಿಲುಕಿ ಅಪಘಾತದ ಭೀಕರತೆಯನ್ನು ಸಾರುತ್ತಿತ್ತು. ಮಹಿಳೆಯ ಪತಿಗೂ ಸ್ವಲ್ಪ ಪ್ರಮಾಣದ ಗಾಯಗಳಾಗಿವೆ. ಮೃತರು ಪತಿ, ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಕುಂದಾಪುರ ಸಂಚಾರ ಠಾಣೆ ಪೊಲೀಸರು  ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next