Advertisement

COVID ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ:ಚಿಕ್ಕಬಳ್ಳಾಪುರದಲ್ಲಿ ದಿನೇಶ್‌ ಗುಂಡೂರಾವ್‌

12:13 AM Oct 06, 2024 | Team Udayavani |

ಚಿಕ್ಕಬಳ್ಳಾಪುರ: ಕೋವಿಡ್‌ ವೇಳೆ ಆರೋಗ್ಯ ಸಚಿವರಾಗಿದ್ದ ಡಾ| ಕೆ. ಸುಧಾಕರ್‌ ಯಾವುದೇ ತಪ್ಪು ಎಸೆಗಿಲ್ಲ ಎಂದರೆ ಕೋವಿಡ್‌ ಹಗರಣಗಳ ತನಿಖೆ ಬಗ್ಗೆ ಭಯಪಡುವ ಅಗತ್ಯವಿಲ್ಲ. ತನಿಖೆ ಪೂರ್ಣ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿ, ನಾವು ವಿಪಕ್ಷದಲ್ಲಿದ್ದಾಗಲೇ ಕೋವಿಡ್‌ ಅಕ್ರಮಗಳ ಬಗ್ಗೆ ಮಾತನಾಡಿದ್ದವು. ಈಗ ಜವಾಬ್ದಾರಿತ ಸರಕಾರದಲ್ಲಿದ್ದಾಗ ಆ ಬಗ್ಗೆ ಪಾರದರ್ಶಕ ತನಿಖೆ ನಡೆಸಲಿದ್ದೇವೆ ಎಂದರು.

ಈಗಾಗಲೇ ಕೋವಿಡ್‌ ಅಕ್ರಮಗಳ ಬಗ್ಗೆ ತನಿಖೆಗೆ ನೇಮಿಸಿದ್ದ ನ್ಯಾಯಾಧೀಶರು ಮಧ್ಯಾಂತರ ವರದಿ ಕೊಟ್ಟಿದ್ದಾರೆ. ಪೂರ್ತಿ ವರದಿ ಕೊಟ್ಟ ಅನಂತರ ಈ ಬಗ್ಗೆ ಸರಕಾರ ಕ್ರಮ ವಹಿಸಲಿದೆ. ಎಲ್ಲಿ ಅನಗತ್ಯವಾಗಿ ಖರೀದಿ ಮಾಡಿದ್ದಾರೆ. ಎಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿದ್ದಾರೆ. ಅಧಿಕಾರಿಗಳನ್ನು ಕರೆಸಿ ಈ ನಿರ್ಧಾರ ಯಾರು ಮಾಡಿದರು. ಆದೇಶ ಮಾಡಿದವರು ಯಾರು? ವಿಚಾರಣೆ ಶುರುವಾಗಲಿದೆ. ಯಾರೇ ಆಗಲಿ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next