ಬೆಂಗಳೂರು: ನಗರದ ಪ್ರಮುಖ 15 ಮೆಡಿಕಲ್ ಕಾಲೇಜಿನ ಮುಖ್ಯಸ್ಥರೊಂದಿಗೆ ಕೋವಿಡ್ ಸೋಂಕಿತರ ಸಾವಿನ ಪ್ರಮಾಣ ತಗ್ಗಿಸುವ ಸಂಬಂಧ ಪಾಲಿಕೆಯ ಕೋವಿಡ್ ವಾರ್ ರೂಮ್ನಲ್ಲಿ ಶುಕ್ರವಾರ ಸಭೆ ನಡೆಸಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಉಂಟಾಗುವ ಮರಣವನ್ನು ತಪ್ಪಿಸುವ ಉದ್ದೇಶದಿಂದ ಪಾಲಿಕೆ ಕೋವಿಡ್ ಸೋಂಕಿತರ ಸಾವಿನ ಕಾರಣ ತಿಳಿದುಕೊಳ್ಳುವ ಕಮಿಟಿ (ಡೆತ್ ಅನಾಲಿಸಿಸ್ ಕಮಿಟಿ)ಯನ್ನು ರಚನೆ ಮಾಡಿದ್ದು,ಕಮಿಟಿಯೂ ಸೋಂಕಿನಿಂದ ಸಾವಾಗುತ್ತಿರುವ ಪ್ರಮಾಣ ತಪ್ಪಿಸುವ ನಿಟ್ಟಿನಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವವರ ಪ್ರಮಾಣ ಒಟ್ಟಾರೆ 1.6 ರಷ್ಟಿದೆ. ಆದರೆ, ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಡುತ್ತಿರುವವರ ಒಟ್ಟಾರೆ ಪ್ರಮಾಣ ಶೇ.1.4 ರಷ್ಟಿದೆ. ಹೀಗಾಗಿ, ನಗರದಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಈ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿರುವ ಆಯ್ದ ಪ್ರಕರಣದ ಆಧಾರದ ಮೇಲೆ ಚರ್ಚೆ ನಡೆಸಲಾಗಿದೆ.
ನಗರದ 15 ಮೆಡಿಕಲ್ ಕಾಲೇಜು ಗಳಲ್ಲಿ ಆಂತರಿಕ ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿತ್ತು. ಈ ಆಂತರಿಕ ತನಿಖೆಯ ಆಧಾರದ ಮೇಲೆ 27 ಆಯ್ದ ಪ್ರಕರಣಗಳಲ್ಲಿ (ಕೋವಿಡ್ ದಿಂದ ಮೃತ) ಸಾವು ಸಂಭವಿಸಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗಿದೆ. 50 ಜನ ಸಾವಿಗೀಡಾದ ಆಸ್ಪತ್ರೆಗಳಲ್ಲಿ ಒಂದು ಪ್ರಕರಣ, 51-150 ಸಾವ®ಪ್ಪಿ ° ರುವ ಆಸ್ಪತ್ರೆಗಳಿಂದ ಮೂರು ಹಾಗೂ 201 ಅಥವಾ ಅದಕ್ಕಿಂತ ಹೆಚ್ಚು ಜನ ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ಆಸ್ಪತ್ರೆ ಗಳಿಂದ ಆಯ್ದ ನಾಲ್ಕು ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಬಿಬಿಎಂಪಿ ವಿಶೇಷ (ಘನತ್ಯಾಜ್ಯ ನಿರ್ವಹಣೆ ಹಾಗೂ ಆರೋಗ್ಯ) ಆಯುಕ್ತ ರಂದೀಪ್ ಉದಯವಾಣಿಗೆ ತಿಳಿಸಿದ್ದಾರೆ.ಸಭೆಯಲ್ಲಿ ವಿಶೇಷ (ಘನತ್ಯಾಜ್ಯ ನಿರ್ವಹಣೆ ಹಾಗೂ ಆರೋಗ್ಯ) ಆಯುಕ್ತ ರಂದೀಪ್, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಇತರರಿದ್ದರು.
ಆಸ್ಪತ್ರೆಗಳು ಹೇಳಿರುವುದು ಏನು? : ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೊರೊನಾ ಅಲ್ಲದೆ ವಿವಿಧ ಕಾಯಿಲೆ ಗಳಿಂದಲೂ ಸಮಸ್ಯೆ ಹಾಗೂ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿದ್ದಾರೆ.ಕೆಲವು ನಿರ್ದಿಷ್ಟ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಇನ್ನು ಸೋಂಕಿನಿಂದ ಸಾವನ್ನಪ್ಪಿದವರ ಬಗ್ಗೆ ಒಂದು ನಿರ್ದಿಷ್ಟ ಮಾದರಿಯಲ್ಲಿ ಮಾಹಿತಿ ಸಂಗ್ರಹ ಮಾಡಿ (ಅವರ ಸಮಸ್ಯೆ, ಆಸ್ಪತ್ರೆಗೆ ದಾಖಲಾಗಿದ್ದು ಹಾಗೂ ಸಾವನ್ನಪ್ಪಿದ) ವಿವರವನ್ನು ಪಾಲಿಕೆಯ ಡೆತ್ ಅನಾಲಿಸಿಸ್ಕಮಿಟಿಗೆ ನೀಡಲು ಸೂಚನೆ ನೀಡಲಾಗಿದೆ ಎಂದು ರಂದೀಪ್ ಮಾಹಿತಿ ನೀಡಿದರು.