Advertisement

ನರೇಗಾ ಕೆಲಸ ವಿಳಂಬ ಮಾಡಿದರೆ ಕ್ರಮ

04:47 AM May 31, 2020 | Team Udayavani |

ಯಳಂದೂರು: ನರೇಗಾ ಯೋಜನೆಯಡಿ ಮಾಂಬಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವ ಜೆಇ ಲಿಂಗಪ್ಪ ವಿರುದ ಶಿಸ್ತು ಕ್ರಮ ಜರುಗಿಸುವಂತೆ ಸದಸ್ಯರು  ಆಗ್ರಹಿಸಿದರು.

Advertisement

ಮಾಂಬಳ್ಳಿ ಗ್ರಾಪಂನಲ್ಲಿ  ನಡೆದ ಗ್ರಾಮಸಭೆಯಲ್ಲಿ ಕೆಲ ಸದಸ್ಯರು, ಕಳೆದ ಒಂದು ವರ್ಷದಲ್ಲಿ ನರೇಗಾ ಯೋಜನೆಯಡಿ ಯಾವುದೇ ಅಭಿವೃದಿ ಕಾರ್ಯಕ್ರಮ ಮಾಡಿಲ್ಲ. ಹಾಗಾಗಿ ಈ ಯೋಜನೆ  ಯಲ್ಲಿ ನಮ್ಮ ಪಂಚಾಯಿತಿ ಹಿಂದುಳಿದಿದೆ. ಪಂಚಾಯಿತಿಯಲ್ಲಿ  ನಡೆಯುವ ಸಭೆಗಳಿಗೂ ಗೈರಾಗುವ ಇವರು ಸದಸ್ಯರ ಮಾತಿಗೆ ಬೆಲೆ ನೀಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 30 ದಿವ್ಯಾಂಗರಿಗೆ ತಲಾ 5 ಸಾವಿರ ರೂ. ವೆಚ್ಚದಲ್ಲಿ ಅವರಿಗೆ ಅಗತ್ಯ  ಪರಿಕರಗಳನ್ನು ಖರೀದಿಸಲು ನಿರ್ಣಯ ಕೈಗೊಳ್ಳಲಾಯಿತು. ಸಭೆ ಬಳಿಕ ಎಲ್ಲಾ ಸದಸ್ಯರು ಗಿಡನೆಟ್ಟು ಇದಕ್ಕೆ ನೀರೆರೆದು ಅಂತಿಮ ಸಭೆಯನ್ನು  ಅವಿಸ್ಮರಣೀಯವಾಗಿಸಿಕೊಂಡರು.

ಸಭೆಯಲ್ಲಿ ಅಧ್ಯಕ್ಷೆ ರೇಖಾ, ಸದಸ್ಯರಾದ ಮಲ್ಲೇಶ್‌, ಗುರುಸ್ವಾಮಿ, ಪರಶಿವಮೂರ್ತಿ, ದೇವರಾಜು, ಶ್ರೀನಿವಾಸ್‌, ಜಯಲಕ್ಷ್ಮೀ, ಪ್ರಭಾವತಿ, ಲಕ್ಷ್ಮೀರಾಮು, ಜಯಮ್ಮ, ಚಿನ್ನಮ್ಮ ಪಿಡಿಒ ಭಾರತಿಬಾರ್ಕಿ, ಕಾರ್ಯದರ್ಶಿ ಶಿವಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next