Advertisement

ಸರಕಾರಿ ಜಾಗ ಒತ್ತುವರಿ ಮಾಡಿದರೆ ಕ್ರಮ

10:49 AM Feb 11, 2020 | Suhan S |

ಚಿಂಚೋಳಿ: ತಾಲೂಕಿನ ಅಣವಾರ ಗ್ರಾಮದ ಸರಕಾರಿ ಜಮೀನು ಸರ್ವೆ ನಂ.12ರಲ್ಲಿ ಕೆಲವರು ಅಕ್ರಮವಾಗಿ ಕಲ್ಲು ತಂದು ಹಾಕಿದ್ದಾರೆ. ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಜನರು ಮನೆ ನಿರ್ಮಿಸಿಕೊಂಡಿದ್ದಾರೆ. ಸರಕಾರಿ ಜಮೀನು ಒತ್ತುವರಿ ಮಾಡಿಕೊಳ್ಳುವುದು ಸರಿಯಲ್ಲ. ಯಾರಾದರು ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಕಲಂ 192ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಎಚ್ಚರಿಕೆ ನೀಡಿದರು.

Advertisement

ಅಣವಾರದಲ್ಲಿ ಶಾಸಕ ಡಾ|ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.ಸರಕಾರಿ ಜಮೀನು ಸರ್ವೆ ನಂ.12ರಲ್ಲಿಒಟ್ಟು 249 ಎಕರೆ ಸರಕಾರಿ ಜಮೀನು ಇದೆ. ಗ್ರಾಮಸ್ಥರು ಬೇಕಾಬಿಟ್ಟಿಯಾಗಿ ಜಮೀನು ಕಬೆjಮಾಡಿಕೊಂಡಿದ್ದಾರೆ. ಈಗಾಗಲೇ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣ ಇತ್ಯರ್ಥವಾಗಿಲ್ಲ. ಸರಕಾರಿ ಜಮೀನು ಅನಧಿಕೃತವಾಗಿ ಒತ್ತುವರಿ ಮಾಡಿದರೆ ಕಂದಾಯ ಇಲಾಖೆಯಿಂದ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವುದು ಜನಸಂಪರ್ಕ ಸಭೆ ಮುಖ್ಯ ಉದ್ದೇಶ. ನಿಮ್ಮ ಸಮಸ್ಯೆಗಳನ್ನು ಲಿಖೀತವಾಗಿ ನೀಡಿ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಬಗೆಹರಿಸಲಾಗುವುದು. ನಿಮ್ಮ ಗ್ರಾಮದಲ್ಲಿ ಎಲ್ಲಿಯೂ ಸ್ಥಳ ಅವಕಾಶವಿಲ್ಲ. ಶೌಚಾಲಯ,ಶಾಲೆ ನಿರ್ಮಾಣಕ್ಕಾಗಿ ಜಾಗದ ಕೊರತೆ ಇದೆ. ನಿಮ್ಮ ಗ್ರಾಮಗಳಿಗೆ ಅನೇಕ ಅಭಿವೃದ್ಧಿ ಕಾರ್ಯ ಮಂಜೂರಿ ಮಾಡಬೇಕಾಗಿದೆ. ಜಾಗ ಇಲ್ಲದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಇಂದ್ರಪಾಡ ಹೊಸಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲ, ಸಿಮೆಂಟ್‌ ರಸ್ತೆಯಿಲ್ಲ. ಜನರಿಗೆ ಸಾರ್ವಜನಿಕ ನಳ ಇಲ್ಲ. ಅಲ್ಲದೇ ಮನೆ ಕಟ್ಟಿಕೊಂಡವರಿಗೆ ಹಣ ಇನ್ನು ಪಾವತಿಯಾಗಿಲ್ಲ. ಗರ್ಭಿಣಿಯರಿಗೆ ಮಾತೃಶ್ರೀ ಯೋಜನೆ ಅಡಿ ಸಹಾಯಧನ ಇನ್ನು ನೀಡಿಲ್ಲ ಎಂದು ಗ್ರಾಮಸ್ಥರು ಶಾಸಕರ ಮುಂದೆ ಸಮಸ್ಯೆ ವಿವರಿಸಿದರು. ಸುಭಾಸ ಗಂಗನಪಳ್ಳಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಸಾಮೂಹಿಕ ಶೌಚಾಲಯಗಳಿಲ್ಲ. ಸ್ಮಶಾನ ಭೂಮಿ ಇಲ್ಲ. ವಿದ್ಯುತ್‌ ಸರಬರಾಜು ಸರಿಯಾಗಿ ಆಗುತ್ತಿಲ್ಲ. ನೀರು ಸಾಕಷ್ಟು ಇದ್ದರು ಸಹ ಗ್ರಾಪಂ ನಿರ್ವಹಣೆ ಸರಿಯಾಗಿಲ್ಲ ಎಂದು ದೂರಿದರು.

ಹಣಮಂತ ಗೌರಿ ಮಾತನಾಡಿ, ನಮ್ಮ ಊರಿನ ಸರಕಾರಿ ಶಾಲೆಗೆ ಕಾಂಪೌಂಡ್‌ ಇಲ್ಲ. ಮಕ್ಕಳುರಾಷ್ಟ್ರಗೀತೆ ಹಾಡುವಾಗ ನಮ್ಮ ಊರಿನ ಗೌಡರ ದನಕರುಗಳು ಶಾಲೆಗೆ ನುಗ್ಗುತ್ತವೆ. ಇದರಿಂದ ಮಕ್ಕಳಿಗೆ ಸುರಕ್ಷತೆ ಇಲ್ಲ. ಸರಕಾರಿ ಶಾಲೆ ಪರಿಸರ ಸಂಪೂರ್ಣ ಹಾಳಾಗಿದೆ. 1ರಿಂದ 8ನೇ ತರಗತಿ ಶಾಲೆಯಲ್ಲಿ ಒಟ್ಟು 70 ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಆದರೆ ಕಳೆದ 20 ವರ್ಷಗಳಿಂದ ಕಾಂಪೌಂಡ್‌ ಇಲ್ಲ ಎಂದು ದೂರಿದರು.

Advertisement

ನಮ್ಮ ಗ್ರಾಪಂ ಅಧ್ಯಕ್ಷ, ಪಿಡಿಒ ಮತ್ತು ಸದಸ್ಯರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ, ಗ್ರಾಪಂ ಅಧ್ಯಕ್ಷ ಬಸವಂತರೆಡ್ಡಿ ಪಾಟೀಲ, ವೆಂಕಟರೆಡ್ಡಿ ಪಾಟೀಲ, ಸಂತೋಷ ಗಡಂತಿ, ಲಕ್ಷ¾ಣ ಆವಂಟಿ, ಶ್ರೀಮಂತ ಕಟ್ಟಿಮನಿ, ಚಂದ್ರಶೇಖರ ಗುತ್ತೇದಾರ, ಬಸವರಾಜ ದೇಶಮುಖ, ಗುರಮ್ಮ ಮಠಪತಿ, ಶಿವಪುತ್ರಪ್ಪ, ಶ್ರೀಕಾಂತ ಗೌನಳ್ಳಿ, ಸೋಮಶೇಖರಮಂಗಲಗಿ, ಸುರೇಶ ಬಟಗೇರಿ, ಶರಣಪ್ಪ ತಳವಾರ, ಸುಧಾಕರ ತಳವಾರ, ವೀರಾರೆಡ್ಡಿ ಬಸರೆಡ್ಡಿ, ಶರಣಪ್ಪ ಪೂಜಾರಿ, ಶಾಂತಲಿಂಗಪ್ಪ ಬಿರಾದಾರ, ಅಧಿಕಾರಿಗಳಾದ ಡಾ| ದೀಪಕ ಪಾಟೀಲ, ಎಇಇ ಮಹ್ಮದ್‌ ಅಹೆಮದ್‌ ಹುಸೇನ್‌, ಎಇಇ ಪರಮೇಶ್ವರ ಬಿರಾದಾರ, ಪ್ರಭುಲಿಂಗ ಬುಳ್ಳ, ಪರಿಮಳ, ಡಾ| ಧನರಾಜ ಬೊಮ್ಮ ಭಾಗವಹಿಸಿದ್ದರು. ನಾಗೀಂದ್ರಪ್ಪ ಬಿರಾದಾರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next