Advertisement

ಅಲ್ಪಸಂಖ್ಯಾತರ ರಕ್ಷಣೆಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ : ಸಿ.ಟಿ.ರವಿ

12:41 PM Dec 15, 2021 | Team Udayavani |

ಬೆಳಗಾವಿ : ಮತಾಂತರ ನಿಷೇಧ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು, ಅಲ್ಪಸಂಖ್ಯಾತರು ಮತಾಂತರ ಆದರೆ ಏನು ಮಾಡಬೇಕು,ಹಾಗಾಗಿ ಅವರ ರಕ್ಷಣೆಗಾಗಿ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

Advertisement

ಅವರ ಧರ್ಮವನ್ನು ಅವರು ಸ್ವತಂತ್ರವಾಗಿ ರಕ್ಷಣೆ ಮಾಡಬಹುದು. ಯಾರು ಭಯ ಪಡುವ ಅವಶ್ಯಕತೆ ಇಲ್ಲ
ಬಲವಂತವಾಗಿ ಮತಾಂತರ ಮಾದಬಾರದು, ಹೀಗಾಗಿ ಕಾಯ್ದೆ ತರುತ್ತಿರುವುದು.ಅವರ ಬಿಸಿನೆಸ್ ಬಂದ್ ಆಗುತ್ತದೆ ಅಂತ ಹೀಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಗೂ ಇಂದೊಂದು ಬಿಸಿನೆಸ್. ಕಾಯ್ದೆ ತರುವುದು ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಎಂದರು.

ಪ್ರಬುದ್ದರು ಈ ಬಗ್ಗೆ ಚರ್ಚೆ ನಡೆಸಲಿ.ಯಾರು ವಿದ್ವಾಂಸರಿದ್ದಾರೆ ಅವರು ಚರ್ಚೆ ಮಾಡಲಿ. ಹಿಂದೂ ಸನಾತನ ಧರ್ಮದ ಬಗ್ಗೆ ಚರ್ಚೆಯಾಗಲಿ.ಆದರೆ ಹಣದ ಮೂಲಕ ಬಿಸಿನೆಸ್ ಮಾಡುವುದು ಸರಿಯಲ್ಲ. ಸಮಾಜದ ಸ್ವಾಸ್ಥ್ಯ ಹಾಗೂ ಹಿತದೃಷ್ಟಿಯಿಂದ ಕಾಯ್ದೆ ತರಲೇ ಬೇಕು.ಇದರ ವಿರುದ್ಧದ ಷಡ್ಯಂತ್ರವನ್ನ ನಾನು ಖಂಡಿಸುತ್ತೇನೆ. ಈ ಕಾಯ್ದೆ ನಾನು ಸ್ವಾಗತಿಸುತ್ತೇನೆ ಎಂದರು.

ಫಲಿತಾಂಶ ಸಮಾಧನ ತಂದಿದೆ ;ಸಂಭ್ರಮಿಸುವ ಸಮಯವಲ್ಲ

ಸಂಭ್ರಮ ಪಡುವ ಸಂಗತಿ ಅಲ್ಲ,ವಿಧಾನ ಪರಿಷತ್ ಚುನಾವಣೆ ಫಲಿತಾಂಶ ನಮಗೆ ಎಚ್ಚರಿಕೆ ಗಂಟೆಯಾಗಿದೆ. ಬೆಳಗಾಂ ಹಾಗೂ ಮೈಸೂರಿನಲ್ಲಿ ಎರಡನೇ ಪ್ರಾಶಸ್ಥ್ಯನಲ್ಲಿ ಸೋತಿರೋದನ್ನ ಗಮನಿಸಬೇಕಾದ ಸಂಗತಿ. ಕಳೆದ ಬಾರಿ ಆರು ಸ್ಥಾನ ಗೆದ್ದಿದ್ದೆವು. ಈಗ ೧೧ ಸ್ಥಾನ ಗೆದ್ದಿದ್ದೇವೆ .ಇನ್ನು ಗೆಲ್ಲುವ ಅವಕಾಶವಿತ್ತುಹೀಗಾಗಿ ಹೆಚ್ಚು ಸಂಭ್ರಮಿಸುವ ಸಮಯವಲ್ಲ ಎಂದರು.

Advertisement

ರಮೇಶ್ ಜಾರಕಿಹೊಳಿ ಮೇಲೆ ಧಮ್ ಇದ್ರೆ ಕ್ರಮಜರುಗಿಸಲೇ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಿಗೆ ನಾನು ನಿಮಗೆ ಧಮ್ ಇದ್ದಿದ್ರೆ ಚಾಮುಂಡೇಶ್ವರಿ ಯಲ್ಲಿ ಸೊಲುತ್ತಿದ್ರೆ ಅಂತಾ ಕೇಳಿದರೆ, ಅವರಿಗೆ ನೋವಾಗುತ್ತದೆ, ಹೀಗಾಗಿ ನಾನು ಅದನ್ನ ಹೇಲುವುದಕ್ಕೆ ಹೋಗುವುದಿಲ್ಲ ಎಂದರು.

ಬೆಳಗಾವಿಯಲ್ಲಿ ೧೩ ವಿಧಾನ ಸಭೆ ಶಾಸಕರು, ಇಬ್ಬರು ಸಂಸದರು ಒಬ್ಬರು ರಾಜ್ಯ ಸಭಾ ಸದಸ್ಯರಿದ್ದರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿಲ್ಲ ಅನ್ನುವುದು ಕಾರ್ಯಕರ್ತರ ಅಭಿಪ್ರಾಯ. ರಮೇಶ್ ಜಾರಕಿಹೊಳಿ ಬಗ್ಗೆ ಎಲ್ಲವೂ ಪಕ್ಷದ ವೇದಿಕೆಯಲ್ಲಿ ಇವೆಲ್ಲವನ್ನು ಚರ್ಚಿಸುತ್ತೇವೆ ಎಂದರು.

ಬಹುಮತ ಸಾಬೀತಿಗೆ ಲಖನ್ ಹಾಗೂ ಜೆಡಿಎಸ್ ಗೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣ ನಿಂತ ನೀರಲ್ಲ, ಯಾವ್ಯಾವ ಸಂದರ್ಭಕ್ಕೆ ಆಯಾ ಕಾಲಘಟ್ಟಕ್ಕೆ ಏನಾಗಬೇಕೋ ಅದು ಮಾಡಬೇಕಾಗುತ್ತದೆ. ರಾಜಕೀಯದಲ್ಲಿ ಮರೆಯುವ ಗುಣವೂ ಇರಬೇಕು. ಜನಮತ ಸಂಪಾದನೆ ಬರಬೇಕು. ಅದಕ್ಕೆ ಮುಂಬುರವ ವಿಧಾನ ಸಭೆ ಚುನಾವಣೆ ಬಿಜೆಪಿಯ ಗುರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next