Advertisement

 ಆ್ಯಸಿಡ್ ದಾಳಿಕೋರ ನಾಗೇಶ್‌ ಕೊನೆಗೂ ಅರೆಸ್ಟ್: ಸ್ವಾಮೀಜಿಯಂತೆ ವೇಷ ಧರಿಸಿದ್ದ!

05:45 PM May 13, 2022 | Team Udayavani |

ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್‌ ನನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಹುಡುಕಾಟ ನಡೆಸುತ್ತಿದ್ದ ವೇಳೆ ತಮಿಳುನಾಡಿನ ತಿರುವಣ್ಣಾಮಲೈ ನಲ್ಲಿ ಸ್ವಾಮೀಜಿಯಂತೆ ವೇಷ ಧರಿಸಿ ತಲೆ ಮರೆಸಿಕೊಂಡಿದ್ದ 27 ವರ್ಷದ ನಾಗೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 28 ರಂದು ದಾಳಿ ನಡೆಸಿ ಪರಾರಿಯಾಗಿದ್ದ. ಆ್ಯಸಿಡ್ ದಾಳಿ ನಡೆದು 16 ದಿನ ಕಳೆದರೂ ಆರೋಪಿ ನಾಗೇಶ್ ಸುಳಿವು ಸಿಗದೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಾಮಾಕ್ಷಿಪಾಳ್ಯ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಗೇಶನನ್ನು ಬಂಧಿಸಿದೆ ಎಂದು ವರದಿಗಳು ಲಭ್ಯವಾಗಿವೆ.

ನಾಗೇಶ್ ಓಡಾಡಿದ ಜಾಗದಲ್ಲಿ ವಾಂಟೆಡ್‌ ಲಿಸ್ಟ್‌ ಫೋಟೋ ಹಾಕಲಾಗಿತ್ತು. ಜತೆಗೆ ಎಲ್ಲೆಡೆ ಕರಪತ್ರಗಳನ್ನು ಹಚ್ಚಲಾಗಿತ್ತು.

ಇದನ್ನೂ ಓದಿ : ಮುಸ್ಕಾನ್‌ ಕುಟುಂಬ ಸೌದಿಗೆ : ತನಿಖೆ ನಡೆಸುವಂತೆ ಗೃಹ ಸಚಿವರಿಗೆ ದೂರು

Advertisement

ಪ್ರೀತಿ ನಿರಾಕರಿಸಿದ ಹೆಗ್ಗನಹಳ್ಳಿ ಕ್ರಾಸ್‌ ನಿವಾಸಿ 25 ವರ್ಷದ ಯುವತಿ ಮೇಲೆ ಹಾಡಹಗಲೇ ಆ್ಯಸಿಡ್ ದಾಳಿ ನಡೆಸಲಾಗಿತ್ತು. ಯುವತಿ ಸೆಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಜಾಪುರ ಮೂಲದ ನಾಗೇಶ್‌, ಪ್ರೀತಿ ಸುವಂತೆ ಸುಮಾರು 7 ವರ್ಷಗಳಿಂದ ದುಂಬಾಲು ಬಿದ್ದಿದ್ದ. ಆಕೆ ನಿರಾಕರಿಸಿದ್ದರಿಂದ ಕುಪಿತನಾಗಿ ದಾಳಿ ನಡೆಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next