Advertisement

ಬಾಲಕನ ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ

11:06 AM Dec 22, 2017 | |

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಎಂಟನೆ ತರಗತಿ ಓದುತ್ತಿದ್ದ, ವಿದ್ಯಾರ್ಥಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿ ಮಂಜುನಾಥ್‌ಗೆ ನಗರದ 51ನೇ ಸೆಷನ್ಸ್‌ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಚಂದ್ರಲೇಔಟ್‌ನಲ್ಲಿ 2015ರ ಫೆಬ್ರವರಿಯಲ್ಲಿ ನಡೆದಿದ್ದ 8 ನೇ ತರಗತಿ ವಿದ್ಯಾರ್ಥಿ ಕೊಲೆ ಪ್ರಕರಣ ಸಾಭೀತಾಗಿದ್ದು, ನ್ಯಾಯಧೀಶೆ ಸುಶೀಲಾ ಅವರು, ಆರೋಪಿ ಮಂಜುನಾಥ್‌ಗೆ ಜೀವಾವಧಿ ಹಾಗೂ ಸಾಕ್ಷ್ಯಾನಾಶ ಆರೋಪ ಸಾಬೀತು ಹಿನ್ನೆಲೆಯಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

Advertisement

ಆರೋಪಿ ಮಂಜುನಾಥ್‌ ವಿರುದ್ಧ ಚಂದ್ರಲೇಔಟ್‌ ಠಾಣೆ ಪೊಲೀಸರು ಸಲ್ಲಿಸಿದ್ದ ದೋಷಾರೋಪಪಟ್ಟಿ, ಸಾಕ್ಷ್ಯಾಧಾರಗಳು. ಬಾಲಕನ ಪೋಷಕರ ಹೇಳಿಕೆಗಳು, ಸಿಸಿಟಿವಿ ಪೂಟೇಜ್‌ ಸಾಕ್ಷ್ಯ ಹಾಗೂ ಪ್ರಾಸಿಕ್ಯೂಶನ್‌ ವಾದವನ್ನು ನ್ಯಾಯಾಲಯ ಪುರಸ್ಕರಿಸಿ ತೀರ್ಪು ನೀಡಿದೆ. ಆರೋಪಿ ಮಂಜುನಾಥ್‌ ಮಹಿಳೆಯೊಬ್ಬರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರವನ್ನು ನೆರೆಮನೆಯ ನಿವಾಸಿ ಮಹಿಳೆ ಯೊಬ್ಬರು ಆತನ ಪೋಷಕರಿಗೆ ತಿಳಿಸಿದ್ದರು.
 
ಇದರಿಂದ ಕೋಪಗೊಂಡಿದ್ದ ಮಂಜುನಾಥ್‌, ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ  ಆಕೆಯ ಪುತ್ರ ಕಿರಣ್‌ನನ್ನು 2015ರ ಫೆ. 4ರಂದು ಶಾಲೆಯ ಬಳಿ ತೆರಳಿ ನಿನ್ನ ತಮ್ಮನಿಗೆ ಅಪಘಾತವಾಗಿದೆ ಎಂದು ನಂಬಿಸಿ ಬೈಕ್‌ನಲ್ಲಿ ಕರೆದೊಯ್ದಿದ್ದ. ಬಳಿಕ ಜ್ಞಾನಭಾರತಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ.  ಬಾಲಕನ ಪೋಷಕರ ದೂರಿನ್ವಯ ಚಂದ್ರ ಲೇಔಟ್‌ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಜುನಾಥ್‌ನನ್ನು ಬಂಧಿಸಿ ವಿಚಾರಣೆಗೊಳ ಪಡಿಸಿದಾಗ ಕೃತ್ಯ ಬಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next