Advertisement

ಆರೋಪ ಮಾಡಿದರೆ ಸಾಲದು, ಸೂಕ್ತ ದಾಖಲೆಗಳಿದ್ದರೇ ಕೊಡಲಿ: ಸಚಿವ ಕಾರಜೋಳ

01:40 PM Aug 22, 2022 | Team Udayavani |

ಮೈಸೂರು : 40% ಕಮಿಷನ್ ಕುರಿತು ಬರೀ ಆರೋಪ ಮಾಡಿದರೆ ಸಾಲದು.ಸೂಕ್ತ ದಾಖಲೆಗಳಿದ್ದರೇ ಕೊಡಲಿ, ಕ್ರಮ ಕೈಗೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಜೊತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತುಕತೆ ನಡೆಸಿರುವ ಹಿನ್ನೆಲೆಯಲ್ಲಿ, ಬರೀ ಆರೋಪ ಮಾಡಿ ಹಿಟ್ ಅಂಡ್ ರನ್ ಕೆಲಸ ಮಾಡಬಾರದು.ಸೂಕ್ತ ದಾಖಲೆಗಳನ್ನೂ ಕೊಡಬೇಕು ಎಂದರು.

ಮೇಕೆದಾಟು ಯೋಜನೆ ಅನುಷ್ಠಾನ ವಿಚಾರ ನ್ಯಾಯಾಲಯದ ಸುಪರ್ದಿಯಲ್ಲಿದೆ.‌ನ್ಯಾಯಾಲಯ ನೀಡುವ ಆದೇಶ ನೋಡಿಕೊಂಡು ಮುಂದುವರಿಯಲಾಗುವುದು ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ಸುರಿದಿರುವ ಅತಿವೃಷ್ಠಿಯಿಂದಾಗಿ ಜಲಸಂಪನ್ಮೂಲ ಇಲಾಖೆಗೆ 600 ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯದ ಹಲವೆಡೆ ಕೆರೆಕೆಟ್ಟೆಗಳು ಒಡೆದಿವೆ.ನಾಲೆಗಳು, ಸೇತುವೆಗಳು ಹಾನಿಗೀಡಾಗಿವೆ‌.ಮೈಸೂರು ಜಿಲ್ಲೆಯಲ್ಲೂ 10.40 ಕೋಟಿ ನಷ್ಟ ಸಂಭವಿಸಿದೆ. ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೇ ಕೊಡಗು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಗೆ ತೆರಳಿ ನಷ್ಟದ ಅಂದಾಜು ಮಾಡಲಾಗಿದೆ. ಆಯಾ ಜಿಲ್ಲೆಗಳ ಅಧಿಕಾರಿಗಳು ನಷ್ಟದ ಅಂದಾಜು ವರದಿ ನೀಡಿದರೆ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹಾನಿಗೀಡಾಗಿರುವ ಸ್ಥಳಗಳ ದುರಸ್ತಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next