Advertisement

ಸುಸ್ಥಿರ ಅಭಿವೃದ್ಧಿಗೆ ನಿಖರ ಅಂಕಿ-ಅಂಶ ಅಗತ್ಯ

03:02 PM Jun 30, 2021 | Team Udayavani |

ಕೊಪ್ಪಳ: ನಿಖರ ಅಂಕಿ-ಅಂಶಗಳ ಜೋಡಣೆ ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರಕ ಅಂಶವಾಗಿರುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|ಪ್ರಭುರಾಜ ನಾಯಕ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದ ಕೃಷಿ ಇಲಾಖೆ ಕಚೇರಿಯಲ್ಲಿ ಭಾರತದಖ್ಯಾತಸಂಖ್ಯಾ ಶಾಸ್ತ್ರಜ್ಞ ಪ್ರೊ| ಪ್ರಶಾಂತ ಚಂದ್ರ ಮಹಾಲನೋಬಿಸ್‌ ಅವರ ಜನ್ಮದಿನ ಅಂಗವಾಗಿ ಮಂಗಳವಾರ ನಡೆದ 15ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸರ್ಕಾರದ ಯಾವುದೇ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ನಿಖರ ಅಂಕಿ-ಅಂಶಗಳು ಅತೀ ಮಹತ್ವದ್ದಾಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ 38 ವಿವಿಧ ಇಲಾಖೆಗಳ ಪೈಕಿ ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯ ಎಲ್ಲ ಇಲಾಖೆಗಳ ಮಾತೃ ಇಲಾಖೆಯಾಗಿದೆ. ಎಲ್ಲ ಇಲಾಖೆಗಳ ಸಮಗ್ರಮುನ್ನೋಟದ ಬಗ್ಗೆ, ಕ್ರಿಯಾ ಯೋಜನೆ,ಸಮರ್ಪಕ ಯೋಜನೆಗಳನ್ನು ರೂಪಿಸಲು,ದತ್ತಾಂಶ ಸಂಗ್ರಹಣೆಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಸಹಕಾರ ಅಗತ್ಯವಿದೆ. ಉತ್ತಮ ಅಂಕಿ-ಅಂಶಗಳ ಆಧಾರದ ಮೇಲೆ ದೇಶದ ಅಭಿವೃದ್ಧಿ ನಿಂತಿರುತ್ತದೆ. ಆದ್ದರಿಂದ ಆಯಾ ಇಲಾಖೆಗೆ ಸಂಬಂಧಪಟ್ಟ ಯೋಜನಾ ವರದಿಗೆ, ಅಂಕಿ-ಅಂಶಗಳ ಮಾಹಿತಿಯನ್ನು ನಿಖರವಾಗಿ ಸಲ್ಲಿಸುವುದು ಅವಶ್ಯ ಎಂದರು.

ಸರ್ಕಾರದ ಕೃಷಿ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ವ್ಯಾಪ್ತಿಯಲ್ಲಿ ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯದ ಕಾರ್ಯ ಮಹತ್ತರವಾದದ್ದು. ಈ ಹಿಂದೆ ದೇಶದಲ್ಲಿ ಶೇ.75ರಷ್ಟು ಜನ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಇಂದು ಶೇ.35 ರಷ್ಟು ಜನರು ಮಾತ್ರ ಕೃಷಿಯಲ್ಲಿತೊಡಗಿದ್ದಾರೆ. ಇದರಿಂದ ಜಿಡಿಪಿ ದರ 100ರಿಂದ 14ಕ್ಕೆ ಇಳಿಕೆಯಾಗಿದೆ. ಜಾಗತಿಕ ಹಸಿವಿನಸ್ಥಿತಿ-ಗತಿಯ ಸೂಚ್ಯಂಕದಲ್ಲಿ ಭಾರತ 107ನೇ ಸ್ಥಾನದಲ್ಲಿರುವುದು ಶೋಚನೀಯ ಸಂಗತಿ. ದೇಶದಲ್ಲಿ ಶೇ.14 ರಷ್ಟು ಮಕ್ಕಳು ಹಸಿವಿನಿಂದಸಾಯುತ್ತಿದ್ದಾರೆ. ಮೂರನೇ ಒಂದರಷ್ಟು ಭಾಗದ ಆಹಾರ ವ್ಯರ್ಥವಾಗುತ್ತಿದೆ. ದೇಶದ ಜನರು 40ನೇ ವಯಸ್ಸಿಗೆ ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಸಾವಿರ ಮಕ್ಕಳಲ್ಲಿ 300 ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಆರೋಗ್ಯ, ಶಿಕ್ಷಣ, ಕೃಷಿ ವಲಯಗಳ ಸಮಸ್ಯೆಗಳ ನಿರ್ವಹಣೆಯಲ್ಲಿ ಸರಿಯಾದ ದತ್ತಾಂಶ ಸಂಗ್ರಹಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.

ಎಡಿಸಿ ಎಂ.ಪಿ. ಮಾರುತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಬಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿದೇಸಾಯಿ ಪ್ರಮಾಣ ವಚನ ಬೋ ಧಿಸಿದರು. ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ವಾರ್ತಾ ಇಲಾಖೆ ಸಹಾಯಕನಿರ್ದೇಶಕ ಸುರೇಶ, ಶಿಕ್ಷಣ ಇಲಾಖೆಯ ಪಿಡಿಪದ್ಮನಾಭ ಇತರರು ಪಾಲ್ಗೊಂಡಿದ್ದರು. ಜಿಪಂಸಹಾಯಕ ಸಾಂಖೀÂಕ ಅ ಧಿಕಾರಿ ಬಿ.ಬಸವರಾಜ ನಿರೂಪಿಸಿದರು. ಸಾಂಖೀÂಕ ಅಧಿಕಾರಿ ಹುಲುಗಪ್ಪ ಸ್ವಾಗತಿಸಿದರು. ಎನ್‌.ಮಂಜುನಾಥ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next