Advertisement

ರೆಸ್ಟಿರೆಂಟ್‍ಗೆ ಆಕಸ್ಮಿಕ ಬೆಂಕಿ –ಅಪಾರ ಹಾನಿ

04:30 PM Nov 05, 2021 | Team Udayavani |

ಪಣಜಿ: ಹಣಜುಣದಲ್ಲಿನ ಬ್ರುಲ್-ಲೈನ್ ಹೊಸ್ಪಿಟಲಿಟಿ ಎಂಬ ರೆಸ್ಟಿರೆಂಟ್‍ಗೆ ಗುರುವಾರ ರಾತ್ರಿ ಆಕಸ್ಮಿಕ ಅಗ್ನಿಸ್ಪರ್ಷ ಸಂಭವಿಸಿ ರೆಸ್ಟೊರೆಂಟ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಸುಮಾರು 5 ಲಕ್ಷ ರೂ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

Advertisement

ರೆಸ್ಟೊರೆಂಟ್‍ನಲ್ಲಿದ್ದ ಕಟ್ಟಿಗೆಯ ಪೀಠೋಪಕರಣ, ಫ್ರಿಜ್, ಸೇರಿದಂತೆ ವಿವಿಧ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಮಾಪ್ಸಾ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಹೆಚ್ಚುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ಇದನ್ನೂ ಓದಿ:- ಡಿವಿಯೇಷನ್‌ ರಸ್ತೆಗೆ ಪುನೀತ್‌, ಕಲಾಮಂದಿರಕ್ಕೆ ರಾಜ್‌ ಹೆಸರಿಡಿ
ಮಾಪ್ಸಾ ಅಗ್ನಿಶಾಮಕ ದಳದ ಅಧಿಕಾರಿ ಅಶೋಕ ಪರಬ್ ರವರ ನೇತೃತ್ವದಲ್ಲಿ ಫಾಯರ್‍ಮೆನ್ ಪರೇಶ್ ಮಾಂದ್ರೇಕರ್ ಮತ್ತಿತರರನ್ನೊಳಗೊಂಡ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next