Advertisement

ಕಾಪು: ಸರಣಿ ಅಪಘಾತ;  ಹಲವರಿಗೆ ಗಾಯ

04:04 AM Feb 18, 2019 | |

ಕಾಪು: ರಾ. ಹೆ. 66ರ ಕಾಪು – ದಂಡತೀರ್ಥ ಶಾಲೆಯ ಸಮೀಪ ಮೂರು ಕಾರುಗಳು ರವಿವಾರ ಸಂಜೆ ಪರಸ್ಪರ ಢಿಕ್ಕಿ ಹೊಡೆದು  ಹಲವರು ಗಾಯಗೊಂಡಿದ್ದಾರೆ.

Advertisement

ಉಡುಪಿಯಿಂದ ಕಾಪು ಕಡೆಗೆ ಬರುತ್ತಿದ್ದ ಮಾರುತಿ ಕಾರು, ಮಂಗಳೂರಿನತ್ತ ತೆರಳುತ್ತಿದ್ದ ಐ 10 ಕಾರು ಮತ್ತು ಉಡುಪಿಗೆ ತೆರಳುತ್ತಿದ್ದ ಸ್ಕಾರ್ಪಿಯೋ ಕಾರುಗಳು ಪರಸ್ಪರ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಡಿವೈಡರ್‌ ಮೇಲಿದ್ದ ವಿದ್ಯುತ್‌ ಕಂಬಕ್ಕೂ ಹಾನಿಯಾಗಿ ದ್ದು, ವಿದ್ಯುತ್‌ ಪೂರೈಕೆ ಕಡಿತಗೊಂಡಿದೆ. ಮಾರುತಿ ಕಾರಿನಲ್ಲಿದ್ದ ಬೆಳಪು  ಮಲಂಗೋಳಿಯ ಸುಧಾಕರ ಆಚಾರ್ಯ (40), ಅವರ ಪತ್ನಿ ಶಾರದಾ ಆಚಾರ್ಯ (37), ಮಕ್ಕಳಾದ ಸುಶ್ಮಿತಾ (15) ಮತ್ತು ಸುಶಾಂತ್‌ (10)   ಆಸ್ಪತ್ರೆಗೆ ದಾಖಲಾಗಿದ್ದಾರೆ. 
 


ಉಡುಪಿಯಿಂದ ಕಾಪುಗೆ ತೆರಳುತ್ತಿದ್ದ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ಐ 10 ಕಾರಿಗೆ ಢಿಕ್ಕಿ ಹೊಡೆದಿದ್ದು, ಆ ಬಳಿಕ ಡಿವೈಡರ್‌ ಮೇಲೇರಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ  ಗುದ್ದಿದೆ. ವಿದ್ಯುತ್‌ ಕಂಬ ಮುರಿದು ಉಡುಪಿ ಕಡೆಗೆ ತೆರಳುವ ರಸ್ತೆಯಲ್ಲಿ ಪಲ್ಟಿ ಹೊಡೆದ ಕಾರು, ಎದುರಿನಿಂದ ಬರುತ್ತಿದ್ದ ಸ್ಕಾರ್ಪಿಯೋಗೆ ಢಿಕ್ಕಿ ಹೊಡೆಯಿತು. ಮಾರುತಿ ಕಾರು ಗುದ್ದಿದ ಪರಿಣಾಮ ಐ 10 ಕಾರು ಡಿವೈಡರ್‌ ಮೇಲೇರಿ ನಿಂತಿತು.

ಮಾರುತಿ ಕಾರಿನಲ್ಲಿದ್ದ  ಎಲ್ಲರೂ  ಗಾಯಗೊಂಡಿದ್ದು, ಸ್ಕಾರ್ಪಿಯೋದಲ್ಲಿದ್ದ ಮಹಿಳೆಯೋರ್ವರು  ಅಪಘಾತ ಕಂಡು ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು  108  ಆ್ಯಂಬುಲೆನ್ಸ್‌ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತ ಗೊಂಡಿತ್ತು. ಕಾಪು ಪೊಲೀಸರು ಮತ್ತು ಸ್ಥಳೀಯರು ಹೆದ್ದಾರಿ ಸಂಚಾರ ಸುಗಮಗೊಳಿಸಿದರು. ಕಾಪು  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next