Advertisement

ಬ್ರಹ್ಮಾವರ: ಭೀಕರ ಅಪಘಾತಕ್ಕೆ; ಪಾದಚಾರಿ ಮಹಿಳೆ ಸಾವು

01:31 PM Sep 22, 2018 | Team Udayavani |

ಬ್ರಹ್ಮಾವರ: ರಾಷ್ಟೀಯ  ಹೆದ್ದಾರಿ 66ರ ಬ್ರಹ್ಮಾವರ ಬಸ್ಸು ನಿಲ್ದಾಣ ಬಳಿ ನಡೆದ ಭೀಕರ ಅಪಘಾತಕ್ಕೆ ಪಾದಚಾರಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. 

Advertisement

ಬ್ರಹ್ಮಾವರ ಬಸ್ಸು ನಿಲ್ದಾಣದಿಂದ ಕುಂದಾಪುರ ಕಡೆಗೆ ಹೊರಟಿದ್ದ ವೇಗದೂತ ಬಸ್ ಕುಂದಾಪುರ ಕಡೆಗೆ ಹೋಗುತ್ತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಟೆಂಪೋ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ದುರ್ದೈವಿ ಮಹಿಳೆ ಹಿರಿಯಡಕದ ಗೀತಾ (36) ಎಂದು ತಿಳಿದು ಬಂದಿದೆ. ಪತಿ ಸುಬ್ರಹ್ಮಣ್ಯ ಮತ್ತು ಪುತ್ರನೊಂದಿಗೆ ಐರೋಡಿಯ ಮನೆಗೆ ಕಾರ್ಯಕ್ರಮವೊಂದಕ್ಕಾಗಿ ತೆರಳಲು ಬಂದಿದ್ದರು. ಈ ವೇಳೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲೆಂದು ಸರ್ಕಾರಿ ಆಸ್ಪತ್ರೆಗೆ ತೆರಳುವ ವೇಳೆ ಅವಘಡ ಸಂಭವಿಸಿದೆ.

 ಬ್ರಹ್ಮಾವರ ಪೊಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next