Advertisement

ಅಪಘಾತ: ತಹಶೀಲ್ದಾರ್‌ರಿಂದ ವೈದ್ಯರಿಗೆ ಪ್ರಥಮ ಚಿಕಿತ್ಸೆ

12:48 PM Jan 02, 2022 | Team Udayavani |

ಚಿಂಚೋಳಿ: ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದ ವೈದ್ಯಾಧಿಕಾರಿ ಮತ್ತು ಅವರ ತಂದೆಗೆ ತಹಶೀಲ್ದಾರ್ ಅವರು ಪ್ರಥಮ ಚಿಕಿತ್ಸೆ ನೀಡಿ ತತ್‍ಕ್ಷಣಕ್ಕೆ ನೆರವಾಗಿದ್ದಾರೆ.

Advertisement

ಗಡಿಕೇಶ್ವಾರ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಝೀಬಾ ಹಾಗೂ ಅವರ ತಂದೆ ಜಹೀರ್‌ ಅಹ್ಮದ್‌ ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದನ್ನು ಗಮನಿಸಿದ ತಹಶೀಲ್ದಾರ್‌ ಅಂಜುಮ್‌ ತಬಸುಮ್‌ ಅವರು ಪ್ರಥಮ ಚಿಕಿತ್ಸೆ ನೀಡಿದರು.

ನಂತರ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ತಾಲೂಕು ಆರೋಗ್ಯಾಧಿಕಾರಿ ಮಹ್ಮದ್‌ ಗಫಾರ್‌, ಡಾ| ಸಂತೋಷ ಪಾಟೀಲ ಚಿಕಿತ್ಸೆ ನೀಡಿದ್ದು, ಜಹೀರ್‌ ಅಹ್ಮದ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ಗೆ ಕಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next