Advertisement

ಅಪಘಾತ: ಸಿಆರ್‌ಪಿಎಫ್ ಯೋಧ, ವಿದೇಶಿ ಪ್ರಜೆ ಸಾವು

09:09 PM Mar 31, 2022 | Team Udayavani |

ಬೆಂಗಳೂರು: ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ  ಬುಧವಾರ ರಾತ್ರಿ  ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಆರ್‌ಪಿಎಫ್ ಯೋಧ ಮತ್ತು ವಿದೇಶಿ ಪ್ರಜೆ ಮೃತಪಟ್ಟಿದ್ದಾರೆ.

Advertisement

ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಸ್ವಾಮಿಗೌಡ(54) ಮತ್ತು ಬೈಕ್‌ ಸವಾರ, ಯೆಮೆನ್‌ ದೇಶದ ಅಮ್ಮರ್‌(22) ಮೃತರು.

ಸ್ವಾಮಿಗೌಡ  ಅವರು ಯಲಹಂಕದಲ್ಲಿರುವ ಸಿಆರ್‌ಪಿಎಫ್ನಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದು,  ರಾತ್ರಿ ಸಿಆರ್‌ಪಿಎಫ್ ಪಶ್ಚಿಮ ಕ್ಯಾಂಪ್‌ನಲ್ಲಿ ರಾತ್ರಿ ಪಾಳಿ ಸಿಬಂದಿಯ ಕರ್ತವ್ಯ ಪರಿಶೀಲಿಸಿ,   11.30ರ ಸುಮಾರಿಗೆ ಪೂರ್ವ ಕ್ಯಾಂಪಸ್‌ ಕಡೆ ಹೋಗಲು ನಡೆದುಕೊಂಡು ಗೇಟ್‌ನಿಂದ ಹೊರಗಡೆ ಬಂದಿದ್ದಾಗ ಅತಿ ವೇಗವಾಗಿ ಬೈಕ್‌ ಚಲಾಯಿಸಿಕೊಂಡು ಬಂದ ಅಮ್ಮರ್‌ ಢಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next