Advertisement

ರೆಡ್‌ ಹ್ಯಾಂಡ್‌ ಆಗಿ ACB ಬಲೆಗೆ ಬಿದ್ದ BBMP ಕಾಂಗ್ರೆಸ್‌ ಸದಸ್ಯ

11:53 AM Mar 31, 2017 | Team Udayavani |

 ಬೆಂಗಳೂರು: ಗುತ್ತಿಗೆ ದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಬಿಬಿಎಂಪಿ ಕಾಂಗ್ರೆಸ್‌ ಸದಸ್ಯ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ. 

Advertisement

ರಾಜಾಜಿನಗರ ವಾರ್ಡ್‌ನ ಸದಸ್ಯ ಜಿ. ಕೃಷ್ಣಮೂರ್ತಿ ಅವರು ಗುತ್ತಿಗೆ ದಾರ ಧನಂಜಯ್‌ ಬಳಿ 15 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ ನಡೆಸಿದೆ. 

ಎಸಿಬಿ ಎಸ್‌ಪಿ ಗಿರೀಶ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಳಿ ಬಳಿಕ ಕೃಷ್ಣಮೂರ್ತಿ ಬಂಧಿಸಲಾಗಿದೆ.  ಈ ವೇಳೆ ಡೀಲ್‌ನಲ್ಲಿ ಭಾಗಿಯಾಗಿದ್ದ ಎಇಇಯೊಬ್ಬನನ್ನೂ ವಶಕ್ಕೆ ಪಡೆಯಲಾಗಿದೆ. 

ಕಾಮಗಾರಿಯ ಹಣ ಬಿಡುಗಡೆಗಾಗಿ 30 ಲಕ್ಷ  ರೂಪಾಯಿ ಲಂಚಕ್ಕೆ ಡೀಲ್‌ ನಡೆಸಿದ್ದರು ಎಂದು ತಿಳಿದು ಬಂದಿದೆ.

ಕೃಷ್ಣಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next