Advertisement

ಭ್ರಷ್ಟರ ಬೇಟೆ; ರಾಜ್ಯದ ವಿವಿಧೆಡೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ 

12:10 PM Dec 13, 2017 | |

ಬೆಂಗಳೂರು : ಭ್ರಷ್ಟಾಚಾರ ಆರೋಪ ಕೇಳಿ  ಬಂದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ ಸಮರಕ್ಕಿಳಿದಿದ್ದು , ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ.

Advertisement

ದಾಳಿಗೊಳಗಾದ ಅಧಿಕಾರಿಗಳ ವಿವರ 

ಚಿಕ್ಕಬಳ್ಳಾಪುರ – ಸಣ್ಣ ನೀರಾವರಿ ಇಲಾಖೆಯ ಎಇಇ ಹೇಮಂತ್‌ (ಬೆಂಗಳೂರು ನಿವಾಸ ಸೇರಿಂತೆ 3 ಕಡೆ ದಾಳಿ )

ತುಮಕೂರು- ಲೋಕೋಪಯೋಗಿ  ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಜಗದೀಶ್‌ 

ದಕ್ಷಿಣ ಕನ್ನಡ – ಕಿನ್ನಿಗೋಳಿಯ  ಪಕ್ಷಿಕೆರೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಫ್. ಮಿರಾಂಡಾ 

Advertisement

ಬೆಳಗಾವಿ -ಕಿತ್ತೂರು ಎಇಇ ಭೀಮಾ ನಾಯ್ಕ 

ಬಳ್ಳಾರಿ -ವಿಜಯ ನಗರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಪಕ್ಷಾವಲಿ ನಿವಾಸ, ಕಚೇರಿ 

ಧಾರಾವಾಡ – ಅಂಕೋಲದ ಎಸಿಎಫ್ ಪಾಂಡುರಂಗ ಪೈ  2 ನಿವಾಸಗಳು 

ಎಸಿಬಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಚಿನ್ನಾಭರಣ, ನಗದು ಮತ್ತು ಆಸ್ತಿ ದಾಖಲೆಗಳನ್ನು ಪತ್ತೆ ಹಚ್ಚಿರುವ ಬಗ್ಗೆ ವರದಿಯಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next