Advertisement

ರಾಜಾಜಿನಗರ ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

05:52 AM Feb 28, 2019 | |

ಬೆಂಗಳೂರು: ರಾಜಾಜಿನಗರದ ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, 8.72 ಲಕ್ಷ ರೂ. ನಗದು ಸೇರಿ ಕೆಲ ಮಹತ್ವದ
ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

Advertisement

ಬುಧವಾರ ಬೆಳಗ್ಗೆ ಬೆಂಗಳೂರು ನಗರ ಎಸಿಬಿ ವಿಭಾಗದ ಎಸ್ಪಿ ಡಾ. ಸಂಜೀವ್‌ ಎಂ. ಪಾಟೀಲ್‌ ನೇತೃತ್ವದ ಸುಮಾರು 40 ಅಧಿಕಾರಿಗಳ ತಂಡ, ಆರ್‌ಟಿಒ ಕಚೇರಿ ಮತ್ತು ಅದರ ಪಕ್ಕದಲ್ಲಿರುವ 14 ಅಂಗಡಿ, ಮಳಿಗೆಗಳನ್ನು ತಪಾಸಣೆ ನಡೆಸಿದೆ. ಈ ವೇಳೆ 8.72 ಲಕ್ಷ ರೂ. ನಗದು, ಮಳಿಗೆಗಳಲ್ಲಿದ್ದ ಎಂಟು ಆರ್‌ಟಿಒ ಕಚೇರಿಗಳ ಅಧಿಕೃತ ಮೊಹರುಗಳು, 1,026 ಆರ್‌ಸಿ ಸ್ಮಾರ್ಟ್‌ ಕಾರ್ಡ್‌, 1,523 ಚಾಲನಾ ಪರವಾನಗಿ ಸ್ಮಾರ್ಟ್‌ ಕಾರ್ಡ್‌, 19 ಎಫ್ಸಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ. ಈ ಸಂಬಂಧ 17 ಮಧ್ಯವರ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಸಾರ್ವಜನಿಕರಿಂದ ಪಡೆಯುತ್ತಿದ್ದ ಲಂಚ, ಅಧಿಕಾರಿಗಳ ಪಾಲು ಎಷ್ಟು? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next