Advertisement

ಬಿಸಿಲಿನ ತೀವ್ರತೆ ಜಾಸ್ತಿಯಾಗುತ್ತಿದ್ದರೂ ರಸ್ತೆಗಿಳಿಯದ ಎಸಿ ಬಸ್‌ !

01:50 AM Mar 27, 2021 | Team Udayavani |

ಮಹಾನಗರ: ಕರಾವಳಿ ಭಾಗದಲ್ಲಿ ಬಿಸಿಲಿನ ಬೇಗೆ ಏರುತ್ತಿದ್ದು, ಪ್ರಯಾಣಿಕರು ಹವಾನಿ ಯಂತ್ರಿತ ಬಸ್‌ಗಳಲ್ಲಿ ಸಂಚರಿಸೋಣ ಅಂದರೆ ಶೇ. 50ರಷ್ಟು ಕೆಎಸ್ಸಾರ್ಟಿಸಿ ಎಸಿ ಬಸ್‌ಗಳು ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ !

Advertisement

ಕರಾವಳಿ ಭಾಗದಲ್ಲಿ ದಿನಂಪ್ರತಿ 37 ಡಿ.ಸೆ.ಗೂ ಹೆಚ್ಚಿನ ಉಷ್ಣಾಂಶ ಏರಿಕೆ ಕಾಣುತ್ತಿದೆ. ಬಿಸಿಲಿನ ಝಳ ಹೆಚ್ಚಾಗಿದೆ. ಹೀಗಿದ್ದಾಗ ದೂರ ಪ್ರಯಾಣಕ್ಕೆ ಹೆಚ್ಚಿನ ಮಂದಿ ಎಸಿ ಬಸ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಹವಾನಿಯಂತ್ರಿತ ಬಸ್‌ ಸಂಚಾರ ಆರಂಭವಾಗಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಒಂದು ವರ್ಷ ಹಿಂದೆ ಕೆಎಸ್ಸಾರ್ಟಿಸಿ ಎಸಿ ಬಸ್‌ ಸಂಚಾರ ರದ್ದುಗೊಂಡಿತ್ತು. ಜೂನ್‌ ತಿಂಗಳಲ್ಲಿ ಹಂತ ಹಂತವಾಗಿ ಬಸ್‌ ಆರಂಭಿಸಲು ನಿಗಮ ತೀರ್ಮಾನಿಸಿತ್ತು. ಆದರೂ ಇನ್ನೂ ಕೂಡ ಪೂರ್ಣಮಟ್ಟದಲ್ಲಿ ಬಸ್‌ ಕಾರ್ಯಾಚರಣೆ ನಡೆಸುತ್ತಿಲ್ಲ.

ಕರಾವಳಿ ಭಾಗದಲ್ಲಿ ಹೆಚ್ಚಿನ ಮಂದಿ ಬೆಂಗಳೂರು, ಮೈಸೂರು ಸಹಿತ ವಿವಿಧ ಪ್ರದೇಶಗಳಿಗೆ ಸಂಚರಿಸುತ್ತಾರೆ. ಕರಾವಳಿ ಭಾಗದಲ್ಲಿ ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಗಳಿವೆ. ಪುತ್ತೂರು ವಿಭಾಗದಿಂದ ಯಾವುದೇ ಹವಾನಿಯಂತ್ರಿತ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿಲ್ಲ. ಇನ್ನು, ಮಂಗಳೂರು ವಿಭಾಗದಿಂದ ಒಟ್ಟು 100 ಎಸಿ ಬಸ್‌ಗಳ ಪೈಕಿ ಸುಮಾರು 40 ಎಸಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆೆ. ಇದರಿಂದಾಗಿ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

ಶೇ.90ರಷ್ಟು ಬಸ್‌ ಸಂಚಾರ
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ಬಸ್‌ ಕಾರ್ಯಾಚರಣೆ ಹಂತ ಹಂತವಾಗಿ ಆರಂಭಗೊಂಡರೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾ ಚರಿಸಿಲ್ಲ. ಆದರೆ ಸದ್ಯ ಸುಮಾರು ಶೇ. 95ರಷ್ಟು ಬಸ್‌ ಕಾರ್ಯಾರಿಸುತ್ತಿದೆ.

ಮಂಗಳೂರು ವಿಭಾಗದಿಂದ ಪ್ರತೀ ದಿನ ಸುಮಾರು 500 ಬಸ್‌ಗಳು ವಿವಿಧ ರೂಟ್‌ಗಳಿದ್ದು, ಇದರಲ್ಲಿ ಸುಮಾರು 490 ಬಸ್‌ಗಳು ಈಗಾಗಲೇ ಸಂಚಾರ ನಡೆಸುತ್ತಿವೆ.

Advertisement

ಆದಾಯಕ್ಕಿಂತ ಖರ್ಚು ಹೆಚ್ಚು
5 ವರ್ಷಗಳ ಹಿಂದೆ ಮಂಗಳೂರಿನಿಂದ ಮಣಿಪಾಲಕ್ಕೆ ಕೆಎಸ್ಸಾರ್ಟಿಸಿ ಪರಿಚಯಿಸಿದ್ದ ಹವಾನಿಯಂತ್ರಿತ ವೋಲ್ವೋ ಬಸ್‌ ಸೇವೆ ಇನ್ನೂ ಆರಂಭಗೊಂಡಿಲ್ಲ. ಈ ಹಿಂದೆ ಮಂಗಳೂರಿನಿಂದ ಮಣಿಪಾಲಕ್ಕೆ ಕೆಎಸ್ಸಾರ್ಟಿಸಿ ಎಸಿ ಬಸ್‌ ಸಂಚಾರದಿಂದಾಗಿ ನಿಗಮಕ್ಕೆ ಪ್ರತೀ ದಿನಕ್ಕೆ 1.50 ಲಕ್ಷ ರೂ. ನಷ್ಟ ಉಂಟಾಗುತ್ತಿತ್ತು. ಎಸಿ ಬಸ್‌ಗಳಲ್ಲಿ ಒಂದು ಲೀಟರ್‌ ಡೀಸೆಲ್‌ಗೆ ಪ್ರತೀ ಕಿ.ಮೀ.ಗೆ 2.5ರಿಂದ 2.8 ಕಿ.ಮೀ.ವರೆಗೆ ಮೈಲೇಜ್‌ ಸಿಗುತ್ತದೆ. ಕಾರ್ಯಾಚರಣೆ ವೇಳೆ 2 ಟೋಲ್‌ ಇದ್ದು, ಟೋಲ್‌ ದರದಲ್ಲಿ ಯಾವುದೇ ರೀತಿಯ ರಿಯಾಯಿತಿ ಇಲ್ಲ. ಒಟ್ಟಾರೆ ವೋಲ್ವೋ ಸಂಚಾರದಿಂದ ಪ್ರತೀ ಕಿ.ಮೀ. 60 ರೂ. ಖರ್ಚು ತಗುತ್ತಿದ್ದು, ಕೊರೊನಾಗೂ ಮುನ್ನ ಕೇವಲ 30 ರೂ. ಮಾತ್ರ ಆದಾಯ ಸಿಗುತ್ತಿದೆ. ಮಂಗಳೂರಿನಿಂದ ಮಣಿಪಾಲಕ್ಕೆ ದಿನವೊಂದಕ್ಕೆ ಒಟ್ಟು ಬಸ್‌ಗಳು 6,500 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, 1.50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.

ಶೇ.40ರಷ್ಟು ಬಸ್‌ ಸಂಚಾರ
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ಹವಾನಿಯಂತ್ರಿತ ಬಸ್‌ ಸಂಚಾರ ಆರಂಭಗೊಂಡಿಲ್ಲ. ಕೋವಿಡ್‌ಗೂ ಹಿಂದೆ ಮಂಗಳೂರಿನಿಂದ ವಿವಿಧ ಕಡೆಗಳಿಗೆ ಸುಮಾರು 100ರಷ್ಟು ಕೆಎಸ್ಸಾರ್ಟಿಸಿ ಎಸಿ ಬಸ್‌ಗಳು ಸಂಚರಿಸುತ್ತಿತ್ತು. ಸದ್ಯ ಸುಮಾರು 40 ಬಸ್‌ಗಳು ಕಾರ್ಯಾಚರಿಸುತ್ತಿವೆೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಬಸ್‌ ಕಾರ್ಯಾಚರಣೆ ಮಾಡುತ್ತೇವೆ.
-ಕಮಲ್‌ ಕುಮಾರ್‌, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ಡಿಟಿಒ

Advertisement

Udayavani is now on Telegram. Click here to join our channel and stay updated with the latest news.

Next