Advertisement

Suraj Revanna ಪ್ರಕರಣದ ಬಗ್ಗೆ ಸಮಯ ಬಂದಾಗ ಹೇಳುವೆ: ಎಚ್‌.ಡಿ. ರೇವಣ್ಣ

10:28 PM Jun 23, 2024 | Team Udayavani |

ಬೆಂಗಳೂರು: ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸದೇ ಬೆಂಗಳೂರಿಗೆ ಯಾಕೆ ಕರೆತಂದರು? ನಮ್ಮನ್ನು ಹೆದರಿಸುವ ಉದ್ದೇಶದಿಂದ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಸೂರಜ್‌ ಅವರ ತಂದೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರಜ್‌ ಮೊದಲು ದೂರು ಕೊಟ್ಟಿದ್ದಾರೆ. ತಪ್ಪು ಮಾಡಿದ್ದರೆ ಅವರೇ ಏಕೆ ದೂರು ಕೊಡಲು ಹೋಗುತ್ತಿದ್ದರು? ಎಂದು ಪ್ರಶ್ನಿಸಿದರು. ಈಗ ಏನೂ ಹೇಳುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ. ನಾವು ತಪ್ಪು ಮಾಡಿದ್ದರೆ ಓಡಿ ಹೋಗುತ್ತಿದ್ದೆವು. ನಮ್ಮ ಕುಟುಂಬವನ್ನು ಯಾರು ಗುರಿ ಮಾಡುತ್ತಿದ್ದಾರೆ? ಷಡ್ಯಂತ್ರ ಮಾಡುವವರು ಯಾರೆಂದು ಈಗ ಹೇಳುವುದಿಲ್ಲ, ಅದೆಲ್ಲವನ್ನು ದೇವರಿಗೆ ಬಿಡುತ್ತೇನೆ. ನನಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next