Advertisement

ರಾಜನಾಥ್‌ ಭೇಟಿಯಾದ ಫಾರೂಕ್‌; ನಿಷ್ಪಕ್ಷದ ತನಿಖೆಗೆ ಒತ್ತಾಯ

05:01 PM Aug 07, 2018 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯರಾಗಿರುವ ಫಾರೂಕ್‌ ಅಬ್ದುಲ್ಲ ಅವರು ಇಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಕಳೆದ ವಾರ ತನ್ನ ನಿವಾಸದ ಆವರಣಕ್ಕೆ ಎಸ್‌ಯುವಿ ವಾಹನವನ್ನು ನುಗ್ಗಿಸಿ.ಅತಿಕ್ರಮಣ ನಡೆಸಿ, ಅಂತಿಮವಾಗಿ ಭದ್ರತಾ ಸಿಬಂದಿಗಳ ಗುಂಡಿಗೆ ಯುವಕನೋರ್ವ ಹತನಾದ ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತದ ತನಿಖೆ ನಡೆಸಬೇಕೆಂದು ವಿನಂತಿಸಿದರು. 

Advertisement

ಮೃತ ಯುವಕನ ಮನೆಯವರ ಭಾವನೆಯನ್ನು ಲೆಕ್ಕಿಸಿ ಘಟನೆಯ ಹಿಂದಿನ ಸತ್ಯವು ತನಿಖೆಯಿಂದ ಹೊರ ಬರುವಂತೆ ಮಾಡಬೇಕು ಎಂದು ಅಬ್ದುಲ್ಲ ಕೋರಿದರು.

ಘಟನೆಯ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವಿವಿಧ ರೀತಿಯ ವರಿದಿಗಳು ಬಂದಿವೆ. ಮೃತ ಯುವಕನ ಮನೆಯವರು, ಹಿತೈಷಿಗಳು ಮತ್ತು ಸ್ನೇಹಿತರ ವಿವರಣೆ ಬೇರೆಯೇ ಇದೆ. ಇವೆಲ್ಲದರ ಹಿಂದಿನ ಸತ್ಯವೇನೆಂಬುದು ಹೊರಬರಬೇಕು ಎಂದು ಅಬ್ದುಲ್ಲ ಮನವಿ ಮಾಡಿಕೊಂಡರು. ರಾಜನಾಥ್‌ ಸಿಂಗ್‌ ಅವರು ಅಬ್ದುಲ್ಲ ಅವರಿಗೆ ಅಂತೆಯೇ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next