Advertisement

Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

10:26 AM Jun 07, 2023 | Team Udayavani |

ಜೈಪುರ: ವ್ಯಕ್ತಿಯೊಬ್ಬ ಬಲವಂತವಾಗಿ ಯುವತಿಯನ್ನು ಅಪಹರಣ ಮಾಡಿ ಸಪ್ತಪದಿಯ ವಿಧಾನವನ್ನು ನೆರವೇರಿಸುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪುಷ್ಪೇಂದ್ರ ಸಿಂಗ್‌ ಎಂಬಾತ 15-20 ಜನರ ಸಹಾಯದಿಂದ ರಾಜಸ್ಥಾನದ ಜೈಸಲ್ಮೇರ್‌ ನ ಸಂಖ್ಲಾ ಗ್ರಾಮದಿಂದ ಯುವತಿಯನ್ನು ಅವಳ ಕುಟುಂಬದ ಮುಂದೆಯೇ ಅಪಹರಿಸಿಕೊಂಡು ಬಂದಿದ್ದಾನೆ. ಇದಾದ ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ಯುವತಿಯನ್ನು ಎತ್ತಿಕೊಂಡು ಅಲ್ಲಿ ಬೆಂಕಿಯನ್ನು ಹಾಕಿ ಸಪ್ತಪದಿ ವಿಧಿ ವಿಧಾನವನ್ನು ಬಲವಂತವಾಗಿ ನೆರವೇರಿಸಿದ್ದಾನೆ. ಯುವತಿ ಜೋರಾಗಿ ಆಳುತ್ತಿದ್ದರೂ, ಅವಳ ಮಾತನ್ನು ಕೇಳದೇ ಬಲವಂತವಾಗಿ ಈ ಪ್ರಕ್ರಿಯೆಯನ್ನು ಆತ ನೆರವೇರಿಸಿದ್ದಾನೆ.

ಯುವಕನ ಪಕ್ಕದಲ್ಲಿ ಒಂದಷ್ಟು ಜನರ ಗುಂಪು ಹಾಗೂ ಯುವಕನ ಮನೆಯವರು ಕೂಡ ಕಾಣಿಸುತ್ತಾರೆ. ಕೆಲವರು ಈ ಘಟನೆಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಜೂ.1 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಅವರಿಗೆ ಟ್ವಿಟರ್‌ ನಲ್ಲಿ ಟ್ಯಾಗ್ ಮಾಡಿ ಘಟನೆಯ ಬಗ್ಗೆ ಖಂಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದಾದ ಬಳಿಕ ಜೈಸಲ್ಮೇರ್‌ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಘಟನೆ ಜೂನ್‌ 1 ರಂದು ನಡೆದಿದೆ. ಕೃತ್ಯದ ಪ್ರಮುಖ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಇತರ ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಸಂಬಂಧ ಪಟ್ಟ ಕಾಯ್ದೆಗಳ ಅಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಈ ಮೊದಲು ಘಟನೆ ನಡೆದ ಬಳಿಕ ಯುವತಿಯ ಮನೆಯವರು ಪೊಲೀಸರಿಗೆ ಕ್ರಮಕ್ಕೆ ಆಗ್ರಹ ಮಾಡಿದಾಗ, ಪೊಲೀಸರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ ಎಂದು ಯುವತಿಯ ತಂದೆ ಮಾಧ್ಯಮದ ಮುಂದೆ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next