Advertisement

ಆರೋಗ್ಯ ಸೇತು ಆ್ಯಪ್‌ನಲ್ಲಿ “ಪತ್ತೆಕಾರ್ಯ’ಸ್ಥಗಿತ

07:24 PM Feb 09, 2023 | Team Udayavani |

ನವದೆಹಲಿ: ಆರೋಗ್ಯ ಸೇತು ಆ್ಯಪ್‌ನಲ್ಲಿರುವ ಮೊಬೈಲ್‌ ಸಂಖ್ಯೆಯ ಮೂಲಕ ಸೋಂಕಿತರ ಪತ್ತೆ ವ್ಯವಸ್ಥೆ  ಸ್ಥಗಿತಗೊಳಿಸಲಾಗಿದೆ, ಅಲ್ಲದೇ ಇದರ ಮೂಲಕ ಸಂಗ್ರಹಿಸಲಾಗಿದ್ದ ಭಾರೀ ಪ್ರಮಾಣದ ಮಾಹಿತಿಯನ್ನು ಅಳಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಲೋಕಸಭೆಗೆ ತಿಳಿಸಿದ್ದಾರೆ.

Advertisement

2020ರಲ್ಲಿ ಭಾರತದಲ್ಲಿ ಕೊರೊನಾ ತೀವ್ರವಾಗಿದ್ದಾಗ ಆರೋಗ್ಯ ಸೇತು ಆ್ಯಪನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಆಗ ಮೊಬೈಲ್‌ ಸಂಖ್ಯೆಗಳ ಮೂಲಕ ಸೋಂಕಿತರು ಎಲ್ಲೆಲ್ಲಿದ್ದಾರೆ ಎಂದು ತಿಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. 2020 ಮೇ 11ರಂದು ಕೇಂದ್ರ ಮಾಡಿದ್ದ ನಿರ್ಧಾರವೊಂದರಲ್ಲಿ, ಕೇಂದ್ರ ಮತ್ತು ರಾಜ್ಯಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಅಧಿಕಾರಿಗಳಿಗೆ ಈ ಮಾಹಿತಿ ಪಡೆಯಲು ಅಧಿಕಾರ ನೀಡಲಾಗಿತ್ತು. ಸದ್ಯ ಆರೋಗ್ಯ ಸೇತು ಆ್ಯಪ್‌, ರಾಷ್ಟ್ರೀಯ ಆರೋಗ್ಯ ಆ್ಯಪ್‌ ರೂಪದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next