Advertisement

ಜನಪ್ರಿಯ ಯೋಜನೆಯಿಂದ ಆಪ್‌ ಗೆಲುವು: ಕಾರಜೋಳ

11:30 PM Feb 11, 2020 | Team Udayavani |

ಬಾಗಲಕೋಟೆ: “ಚುನಾವಣೆ ಹಿನ್ನೆಲೆಯಲ್ಲಿ ಘೋಷಿಸಿದ ಜನಪ್ರಿಯ ಯೋಜನೆಗಳೇ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಗೆಲ್ಲಲು ಕಾರಣವಾ ಗಿದ್ದು ಇದು ಬಿಜೆಪಿಗೆ ಹಿನ್ನಡೆಯಲ್ಲ. ಅದೊಂದು ನಗರಕ್ಕೆ ಸೀಮಿತಗೊಂಡ ಚುನಾವಣೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕೇಜ್ರಿವಾಲ್‌ ಸರ್ಕಾರ ಜನಪ್ರಿಯ ಯೋಜನೆ ಘೋಷಿಸಿ, ಓಟ್‌ ಬ್ಯಾಂಕ್‌ ರಾಜಕಾರಣ ಮಾಡಿದೆ. ದೆಹಲಿ ಒಂದು ಊರಿ (ನಗರಕ್ಕೆ)ಗೆ ಸೀಮಿತವಾದ ಆಡಳಿತ. ರಾಜಕೀಯ ಗಿಮಿಕ್‌ ಮಾಡಿ ಗೆದ್ದಿದ್ದಾರೆಂದರು.

ಸಿದ್ದರಾಮಯ್ಯರಿಂದಲೇ ದರಿದ್ರತನ: ದರಿದ್ರತನ ಪ್ರಾರಂಭ ಆಗಿದ್ದೇ ಸಿದ್ದರಾಮಯ್ಯ ಸರ್ಕಾರದಿಂದ. ಹೆಚ್ಚು ಸಾಲ ಮಾಡಿದ್ದೇ ಅವರು. ದರಿದ್ರತನ ಆರಂಭ ಆಗಿದ್ದೇ ಅಲ್ಲಿಂದ. ಸ್ವಲ್ಪ ಆರ್ಥಿಕ ತೊಂದರೆ ಆಗಿದೆ. ಆದರೆ, ಸಿದ್ದರಾಮಯ್ಯ ಹೇಳಿದಂತೆ ತೊಂದರೆ ಬಂದಿಲ್ಲ.

ಪ್ರಕೃತಿ ವಿಕೋಪದಲ್ಲಿ ಮನೆ ಮಠ ಕಳೆದುಕೊಂಡು ಸಂತ್ರಸ್ತರಾದರೆ, ರೈತರ ಬೆಳೆ ನಾಶ ಆಯಿತು. ಸಾರ್ವಜನಿಕ ಆಸ್ತಿಪಾಸ್ತಿ ನಾಶ ಆಗಿದ್ದರಿಂದ ಸರ್ಕಾರ ಕನಿಷ್ಠ ಹತ್ತು ಸಾವಿರ ಕೋಟಿ ಖರ್ಚು ಮಾಡಿದೆ. ಹೀಗಾಗಿ ಸ್ವಲ್ಪ ಆರ್ಥಿಕ ತೊಂದರೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next