Advertisement

BJP ವಿರುದ್ಧದ ಪ್ರಸ್ತಾವಿತ ಮೈತ್ರಿ ಕೂಟಕ್ಕೆ ಆಪ್‌ ಸೇರಲ್ಲ : ಕೇಜ್ರಿ

04:19 PM Aug 10, 2018 | Team Udayavani |

ಜಿಂದ್‌ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ವಿರೋಧ ಪಕ್ಷಗಳ ಪ್ರಸ್ತಾವಿತ ಮೈತ್ರಿ ಕೂಟಕ್ಕೆ ಆಮ್‌ ಆದ್ಮಿ ಪಕ್ಷ ಸೇರುವುದಿಲ್ಲ ಎಂದು ಇಂದು ಶುಕ್ರವಾರ ಆಪ್‌ ನಾಯಕ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

Advertisement

ಪ್ರಸ್ತಾವಿತ ಮೈತ್ರಿ ಕೂಟ ಸೇರುವ ಪಕ್ಷಗಳಿಗೆ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಪಾತ್ರ ಇಲ್ಲ ಎಂದು ಕೇಜ್ರಿವಾಲ್‌ ಹೇಳಿದರು. 

ಹರಿಯಾಣ ವಿಧಾನಸಭೆ ಮತ್ತು ಲೋಕಸಭೆಯ ಎಲ್ಲ ಸ್ಥಾನಗಳಿಗೆ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್‌ ಹೇಳಿದರು. 

ದಿಲ್ಲಯಲ್ಲಿನ ಅಭಿವೃದ್ಧಿ ಕೆಲಸಗಳೆಲ್ಲ ನಿಂತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರಿದ  ಕೇಜ್ರಿವಾಲ್‌, ದಿಲ್ಲಿ  ಜನರ ಕಲ್ಯಾಣಕ್ಕಾಗಿ ತನ್ನ ಸರಕಾರ ಕೈಗೊಂಡ ಪ್ರತಿಯೊಂದು ಕ್ರಮಗಳಿಗೆ ತಡೆ ಒಡ್ಡಲಾಗಿದೆ ಎಂದು ಆರೋಪಿಸಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next