Advertisement

Supreme Court ಕ್ಷಮೆಯಾಚಿಸಲು ಸಂಸದ ಛಡ್ಡಾಗೆ ಸೂಚನೆ

12:08 AM Nov 04, 2023 | Team Udayavani |

ಹೊಸದಿಲ್ಲಿ: ಆಯ್ಕೆ ಸಮಿತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಅಧ್ಯಕ್ಷರ ಬಳಿ ಬೇಷರತ್‌ ಕ್ಷಮೆ ಯಾಚಿಸುವಂತೆ ಅಮಾನತುಗೊಂಡಿರುವ ರಾಜ್ಯಸಭೆಯ ಆಪ್‌ ಸಂಸದ ರಾಘವ್‌ ಛಡ್ಡಾಗೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

Advertisement

ಅವರ ಕ್ಷಮೆಯನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ರಾಜ್ಯಸಭೆ ಸಭಾಪತಿವರಿಗೆ ನ್ಯಾಯಪೀಠ ಸೂಚಿಸಿದೆ. ದಿಲ್ಲಿ ಆಡಳಿತ ಸೇವಾ ಮಸೂದೆಯನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ವಹಿಸಬೇಕು ಎಂದು ಕೋರುವಾಗ ಪತ್ರಕ್ಕೆ ಇತರ ಸಂಸದರ ಒಪ್ಪಿಗೆ ಪಡೆಯದೆಯೇ ಹೆಸರು ಸೇರಿಸುವ ಮೂಲಕ ವಿಶೇಷ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆಂದು ಛಡ್ಡಾ ಅವರನ್ನು ಅನಿರ್ದಿಷ್ಟಾವಧಿಗೆ ಸದನದಿಂದ ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ರಾಘವ್‌ ಸುಪ್ರೀಂ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್‌ ಕ್ಷಮೆಯಾಚನೆಗೆ ಸಲಹೆ ನೀಡಿ ದೀಪಾವಳಿ ಬಳಿಕ ಈ ಸಂಬಂಧಿ ಸಿದ ಬೆಳವಣಿಗೆಯ ವರದಿ ನೀಡಲು ಅಟಾರ್ನಿ ಜನರಲ್‌ಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next