Advertisement

ಅನರ್ಹತೆ ಆದೇಶಕ್ಕೆ‌ ತಡೆ ಅರ್ಜಿ ತಿರಸ್ಕೃತ

09:26 AM Jan 25, 2018 | Team Udayavani |

ಹೊಸದಿಲ್ಲಿ: ಲಾಭದಾಯಕ ಹುದ್ದೆ ಹೊಂದಿರುವ ಆರೋಪಕ್ಕೆ ಗುರಿಯಾಗಿ ಅನರ್ಹತೆಗೆ ಗುರಿಯಾಗಿರುವ ಆಪ್‌ನ 20 ಶಾಸಕರಿಗೆ ಹೈಕೋರ್ಟ್‌ನಲ್ಲಿಯೂ ಹಿನ್ನಡೆಯಾಗಿದೆ. ಚುನಾವಣಾ ಆಯೋಗದ ನಿರ್ಧಾರಕ್ಕೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡದ ದಿಲ್ಲಿ ಹೈಕೋರ್ಟ್‌, ಜ.29ರ ವರೆಗೆ ಉಪ ಚುನಾವಣೆ ನಡೆಸುವ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಕಟಣೆ ಹೊರಡಿಸಬಾರದು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. 

Advertisement

ನ್ಯಾಯಮೂರ್ತಿ ವಿಭು ಬಖು ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಸರಕಾರ, ಆಮ್‌ ಆದ್ಮಿ ಪಕ್ಷ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿದ್ದು, ಸೋಮವಾರದ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿ ದ್ದಾರೆ. ನ್ಯಾಯಪೀಠ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನೂ ಒದಗಿಸುವಂ ತೆಯೂ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಈ ಪ್ರಕರಣ ಅತ್ಯಂತ ಮಹತ್ವದ್ದಾಗಿದ್ದು, ಸೋಮವಾರದಿಂದ ಪ್ರತಿ ದಿನ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ. ಅಲ್ಲಿಯ ವರೆಗೆ ಯಾವುದೇ ರೀತಿಯಲ್ಲಿ 20 ಕ್ಷೇತ್ರಗಳಿಗೆ ಉಪ ಚುನಾವಣೆ ಬಗ್ಗೆ ಅಧಿ ಸೂಚನೆ ಹೊರಡಿಸಬಾರದು ಎಂದು ನ್ಯಾಯಪೀಠ ಹೇಳಿದೆ.

ಆಪ್‌ ಶಾಸಕರ ಪರ ವಾದಿಸಿದ ಹಿರಿಯ ನ್ಯಾಯವಾದಿ ಕೆ.ವಿ.ವಿಶ್ವನಾಥನ್‌, ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ನೀಡದೇ ಇದ್ದರೆ, ಕನಿಷ್ಠ ಉಪ ಚುನಾವಣೆ ನಡೆಸುವ ಆಯೋಗದ ಕ್ರಮಕ್ಕಾದರೂ ತಡೆಯಾಜ್ಞೆ ನೀಡಬೇಕು ಎಂದು ಅರಿಕೆ ಮಾಡಿಕೊಂಡಿದ್ದರು. ಜ.19ರಂದು ಕೇಂದ್ರ ಚುನಾವಣಾ ಆಯೋಗ ಆಪ್‌ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next