Advertisement

‘ಐ ಕ್ವಿಟ್ ಬೆನ್ನಲ್ಲೇ ಐ ಸೇಫ್’ ಎಂದ ಸ್ಯಾಂಡಲ್ ವುಡ್ ನಟಿ ಜಯಶ್ರೀ ರಾಮಯ್ಯ: ಏನಿದು ಘಟನೆ ?

01:43 PM Jul 22, 2020 | Mithun PG |

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಜಯಶ್ರೀ ರಾಮಯ್ಯ ಅವರು ಬೆಳ್ಳಂಬೆಳಗ್ಗೆ ‘I Quit, goodbye the world and depression’   ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಅವರು ಸ್ಪಷ್ಟನೆ ನೀಡಿದ್ದು, ನಾನು ಸೇಫ್​ ಆಗಿದ್ದೇನೆ ಎಂದಿದ್ದಾರೆ.

Advertisement

ಜಯಶ್ರೀ  ನಿನ್ನೆ ಜಯನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಖಿನ್ನತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.  ತದನಂತರದಲ್ಲಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಫೇಸ್ ಬುಕ್ ನಲ್ಲಿ ಐ ಕ್ವಿಟ್​ ,ಎಲ್ಲವನ್ನೂ  ತೊರೆಯುತ್ತೇನೆ ಎಂದು ಪೋಸ್ಟ್ ಮಾಡಿದ್ದರು.

ಈ ವೇಳೆ ಅವರಿಗೆ ಅನೇಕರು ಕರೆ ಮಾಡಿದರೂ ಯಾರೊಬ್ಬರ ಕರೆಯನ್ನೂ ಅವರು ಸ್ವೀಕರಿಸಿರಲಿಲ್ಲ. ಇದು ಸಾಕಷ್ಟು ಆತಂಕ ಮೂಡಿಸಿತ್ತು. ಅವರ ಪೋಸ್ಟ್ ಗೆ  ಕಮೆಂಟ್​ಗಳ ಸುರಿಮಳೆಯೇ ಹರಿದು ಬಂದಿತ್ತು.  ಇದಾದ ಬೆನ್ನಲ್ಲೇ ಜಯಶ್ರೀ ಹಳೆಯ ಪೋಸ್ಟ್​ ಡಿಲೀಟ್​ ಮಾಡಿ ಹೊಸ ಪೋಸ್ಟ್​ ಹಾಕಿದ್ದಾರೆ. ಅದರಲ್ಲಿ ತಾವು ಸೇಫ್​ ಆಗಿರುವುದಾಗಿ ಹೇಳಿಕೊಂಡಿದ್ದಾರೆ.

ಈ ವೇಳೆ ದುಡುಕಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಅನೇಕರು ಕಿವಿಮಾತು ಹೇಳಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next