Advertisement

ಆಕಾರ್‌ ಪಟೇಲ್‌ ವಿದೇಶ ಪ್ರಯಾಣಕ್ಕೆ ದಿಲ್ಲಿ ಕೋರ್ಟ್‌ ತಡೆ

08:38 PM Apr 08, 2022 | Team Udayavani |

ನವದೆಹಲಿ: ಆ್ಯಮ್ನೆಸ್ಟಿ ಇಂಡಿಯಾದ ಮುಖ್ಯಸ್ಥ ಆಕಾರ್‌ ಪಟೇಲ್‌ ಅವರ ವಿದೇಶ ಪ್ರಯಾಣಕ್ಕೆ ನವದೆಹಲಿಯ ವಿಶೇಷ ಕೋರ್ಟ್‌ ತಡೆ ನೀಡಿದೆ.

Advertisement

ಜತೆಗೆ ಕೋರ್ಟ್‌ ಅನುಮತಿ ನೀಡುವ ವರೆಗೆ ವಿದೇಶ ಪ್ರಯಾಣ ಮಾಡುವಂತಿಲ್ಲ. ಜತೆಗೆ ಅವರ ವಿರುದ್ಧ ಲುಕೌಟ್‌ ನೋಟಿಸ್‌ ನೀಡಿದ್ದಕ್ಕೆ ಸಿಬಿಐ ಕ್ಷಮೆ ಯಾಚಿಸಬೇಕು ಎಂಬ ಆದೇಶಕ್ಕೂ ಶುಕ್ರವಾರ ತಡೆಯಾಜ್ಞೆ ನೀಡಲಾಗಿದೆ.

ಇದನ್ನೂ ಓದಿ:ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ

ಪ್ರಕರಣದ ಮುಂದಿನ ವಿಚಾರಣೆ 21ಕ್ಕೆ ನಿಗದಿಪಡಿಸಲಾಗಿದೆ. ಗುರುವಾರ ನಡೆದಿದ್ದ ಬೆಳವಣಿಗೆಯಲ್ಲಿ ಇನ್ನೊಬ್ಬರು ನ್ಯಾಯಾಧೀಶರಾದ ಪವನ್‌ ಕುಮಾರ್‌, ಸಿಬಿಐ ಆಕಾರ್‌ ವಿರುದ್ಧ ಹೊರಡಿಸಿರುವ ಲುಕೌಟ್‌ ಸೆಕ್ಯುಲರ್ ಹಿಂಪಡೆಯಬೇಕು, ಹಾಗೆಯೇ ಲಿಖಿತವಾಗಿ ಕ್ಷಮೆ ಕೇಳಬೇಕು ಎಂದು ಆದೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next