Advertisement

ಅ.1ರಿಂದ ಮರಣ ನೋಂದಾವಣೆಗೆ ಆಧಾರ್‌ ನಂಬರ್‌ ಕಡ್ಡಾಯ

06:45 PM Aug 04, 2017 | Team Udayavani |

ಹೊಸದಿಲ್ಲಿ : ಗುರುತು ವಂಚನೆ ತಡೆಯುವ ನಿಟ್ಟಿನಲ್ಲಿ ಮರಣ ನೋಂದಾವಣೆಗೆ ಸರಕಾರ ಇದೇ ವರ್ಷ ಅಕ್ಟೋಬರ್‌ 1ರಿಂದ ಆಧಾರ್‌ ನಂಬರ್‌ ಸಲ್ಲಿಸುವುದನ್ನು ಕಡ್ಡಾಯ ಮಾಡಿದೆ.

Advertisement

ಜಮ್ಮು ಕಾಶ್ಮೀರ, ಅಸ್ಸಾಂ ಮತ್ತು ಮೇಘಾಲಯವನ್ನು ಹೊರತಪಡಿಸಿ ದೇಶದ ಉಳಿದೆಲ್ಲ ರಾಜ್ಯಗಳ ನಿವಾಸಿಗಳಿಗೆ ಈ ನಿಯಮ ಅ.1ರಿಂದ ಅನ್ವಯಿಸಲಿದೆ.

ಜಮ್ಮು ಕಾಶ್ಮೀರ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಿಗೆ ಪ್ರತ್ಯೇಕ ದಿನಾಂಕದಂದು ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಗೃಹ ಸಚಿವಾಲಯ ಹೇಳಿದೆ.

ಮರಣ ನೋಂದಾವಣೆಗೆ ಆಧಾರ್‌ ನಂಬರ್‌ ನೀಡುವುದನ್ನು ಕಡ್ಡಾಯಗೊಳಿಸುವ ಮೂಲಕ ಮೃತ ವ್ಯಕ್ತಿಯ ಸಂಬಂಧಿಕರು, ಅವಲಂಬಿತರು ಅಥವಾ ನಿಕಟವರ್ತಿಗಳು ಕೊಟ್ಟಿರುವ ವಿವರಗಳ ನಿಖರತೆಯನ್ನು ಖಾತರಿಪಡಿಸಬಹುದಾಗಿದೆ ಎಂದು ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ರಿಜಿಸ್ಟ್ರಾರ್‌ ಜನರಲ್‌ ಕಾರ್ಯಾಲಯ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next